ಕಲಬುರಗಿ: ಸೇಡಂ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಸುಲೇಪೇಟನ ವಿಶ್ವಕರ್ಮ ಏಕದಂಡಗಿ ಮಠಕ್ಕೆ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಅವರು ೨೫ ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದಕ್ಕೆ ಅವರನ್ನು ಸನ್ಮಾನಿಸಲಾಯಿತು.
ಈ ನಿಯೋಗದಲ್ಲಿ ದೊಡ್ಡೆಂದ್ರ ಸ್ವಾಮಿಗಳು, ಚಂದ್ರಶೇಖರ ಸ್ವಾಮಿಗಳು, ಮೋನಪ್ಪ ಪೋದ್ದಾರ್, ಅಮೃಣ ಹಳ್ಳಿ, ಕೃಷ್ಣ ಬಡಿಗೇಡಿ ಸೇಡಂ, ಚಂದ್ರಕಾಂತ ಸುಲೇಪೇಟ್, ಶ್ರೀನಿವಾಸ ಕಾಸೋಜ, ಗಂಗಾಧರ ಕೆರಳ್ಳಿ, ಗುರುರಾಜ ಸುಲೇಪೇಟ್, ಸಂತೋಷಕುಮಾರ ಇದಲಾಯಿ, ಸಂಗಪ್ಪ ಸುಲೇಪೇಟ್, ಕೃಷ್ಣ ಸುಲೆಪೇಟ, ನರಸಪ್ಪ ಸೋಮಲಿಂಗದಳ್ಳಿ, ಶಶಿಕಾಂತ ಪಸ್ತಪೂರ, ಶ್ರೀಮಂತ ಕೋರವಾರ, ರಾಜು ಸುಲೇಪೇಟ, ಮೋನಪ್ಪ ಇದಲಾಯಿ, ರಮೇಶ ಇದಲಾಯಿ. ಅದರಂತೆ ೨೫ ಜನ ನಿಯೋಗದಲ್ಲಿ ಭಾಗವಹಿಸಿದರು.