ಕಲಬುರಗಿ : ಡಾ.ಅಂಬೇಡ್ಕರ್ ನಿಗಮದಿಂದ ಸಾಲದ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಯವ ವೇಳೆ ತಾಂತ್ರಿಕ ದೋಷ ಕಂಡುಬರುತ್ತಿದ್ದು, ಕೂಡಲೇ ಇತ್ಯರ್ಥಿಸುವಂತೆ ಬಿಎಸ್ಪಿ ಜಿಲ್ಲಾ ಗ್ರಾಮೀಣ ಘಟಕದ ಮುಖಂಡರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದರು.
೨೦೨೨-೨೩ನೇ ಸಾಲಿನ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಿವಿಧ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ತಾಂತ್ರಿಕ ದೋಷದಿಂದ ಅರ್ಜಿ ಸ್ವೀಕೃತಿಗೆ ಸರ್ವರ್ ಸಹಕರಿಸುತ್ತಿಲ್ಲ. ಹಲವು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವಂತಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಬಿಎಸ್ಪಿ ಗ್ರಾಮೀಣ ಅಧ್ಯಕ್ಷ ಅಂಬರಾಯ ದಸ್ತಾಪುರ, ಗ್ರಾಮೀಣ ಉಸ್ತುವಾರಿ ವಿಜಯಕುಮಾ ಅಂಕಲಗಿ, ಜಿಲ್ಲಾ ಕಾರ್ಯದರ್ಶಿ ದೇವಿಂದ್ರ ಉಪಳಾಂವಕರ, ಸಂಯೋಜಕ ರವಿ ಕೋರಿ, ವಿಜಯಕುಮಾರ ಓಕಳಿ, ವೆಂಕಟ ಜಾಧವ, ಸಂಜುಕುಮಾರ ಮೇಲಿನಮನಿ, ಶರಣಬಸಪ್ಪ ಹೊಸಮನಿ, ಉಮೇಶ ಶೃಂಗೇರಿ ಇದ್ದರು.