ಕಲಬುರಗಿ: ನಗರದ ಮಾನಕರ್ ಲೇಔಟ್ನಲ್ಲಿರುವ ಶ್ರೀ ಹರಳಯ್ಯ ಭವನದಲ್ಲಿ ಜೇವರ್ಗಿ ತಾಲೂಕಿನ ಕಲಬುರಗಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಡಿಯಲ್ಲಿ ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ೧೨ನೇ ವಾರ್ಷಿಕ ಮಹಾ ಸಭೆಯನ್ನು ಜಿಲ್ಲಾ ಸೌಹಾರ್ದ ಒಕ್ಕೂಟ ನಿಯಮಿತದ ಅಧ್ಯಕ್ಷ ಎಸ್.ಎಸ್.ಪಾಟೀಲ ಅವರು ಉದ್ಘಾಟಿಸಿದರು.
ಜೇವರ್ಗಿ ತಾಲೂಕಿನ ಕಲಬುರಗಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ವಿಜಯಕುಮಾರ ಧುದಗಿ, ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಬಸವರಾಜ ಜಿ.ಪಾಟೀಲ, ಉಪಾಧ್ಯಕ್ಷ ಬಸವರಾಜ ಎಂ.ಪಾಟೀಲ, ಆಡಳಿತ ಮಂಡಳಿಯ ಸದಸ್ಯರಾದ ಪಿ.ಎಸ್.ಮಾಲಿಪಾಟೀಲ, ಮಲ್ಲಿಕಾರ್ಜುನ್ ಕೆ. ಪಾಟೀಲ್, ಹುಲಿಕಂಠರಾಯ ಎಸ್.ಎಂ, ಶಾಂತಗೌಡ ಎನ್.ಪಾಟೀಲ, ಭೀಮರಾಯ ಪೂಜಾರಿ ಮದ್ರಿ, ಹಣಮಂತಪ್ಪಾ ಬಿರಾಳ, ಅಂಬಲಪ್ಪಾ ದೇಸಾಯಿ, ಶ್ರೀಪಾದ ಜೋಶಿ, ಖೈಸರ್ ಜಹಾನ್ ಶರೀನ್, ನಿರ್ಮಲ ಜಿ. ಸಿಕೇದ್, ತಾತಗೌಡ ಪಾಟೀಲ, ಅಶೋಕ ಹರವಾಳ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.