ಕಲಬುರಗಿ: ಅಳಂದ ತಾಲೂಕಿನ ಬಿಲಗುಂದಿ ಗ್ರಾಮದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಜೀ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಕಾರಣ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಸಿಹಿ ಹಂಚಿ ಖರ್ಗೆ ಅವರ ಬೃಹತ್ ಕಟ್ಟೋಟಿಗೆ ಹಾಲಿನ ಅಭಿಷೇಕ ಮಾಡಿ ಆನಂದಿಸಿದರು.
ಅಲ್ಲದೆ ಪಟಾಕಿಸಿಡಿಸಿ ಸಂಭ್ರಮಿಸಲಾಯಿತು, ಕಾಂಗ್ರೆಸ್ ಪಕ್ಷದ ಹಲವಾರು ಕಾರ್ಯಕರ್ತರು ಹಾಗೂ ಗ್ರಾಮದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಜಯಕುಮಾರ್ ಬಿಲಗುಂದಿ, ನಂದಕುಮಾರ್ ಬಿರಾದಾರ್, ಶಿವಪುತ್ರಪ್ಪ ಬಿರಾದಾರ, ಸುಪ್ರೀತ್ ಡಿ ಬಿಲಗುಂದಿ, ರವೀಂದ್ರ ಕಮ್ಮನ್ ,ಸಿದ್ದಣ್ಣ ಪಾಟೀಲ್ , ಬಸವರಾಜ್
ತಳಕೇರಿ ಹಾಗೂ ಸುರೇಶ್ ಬಿಲಗುಂದಿ ಸೇರಿದಂತೆ ಗ್ರಾಮದ ಮಹಿಳೆಯರು ಮಕ್ಕಳು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.