ಕಲಬುರಗಿ: ರಾಯಚೂರು ಜಿಲ್ಲೆಯಲ್ಲಿ 3 ದಿನ ನಡೆಯಲಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು, ಮುಖಂಡರು ತೆರಳಿದ್ದಾರೆ.
ಇಲ್ಲಿನ ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ನೇತ್ವಲ್ಲಿ ಶುಕ್ರವಾರ 100 ವಾಹನ, 3 ಬಸ್ಗಳಲ್ಲಿ ಸಾವಿರಾರು ಜನ ತೆರಳಿದು. ನಾವೆಲ್ಲರೂ ಗಿಲ್ಲೆಸುಗೂರು ಬಲಿ ಬಾರತ ಜೋಡೋ ಆತ್ರೆ ಸೇರಲಿz್ದÉೀವೆ. ಈ ಮೂಲಕ ರಾಹುಲ್ ಗಾಂಧಿಯವರ ಯಾತ್ರೆಯನ್ನು ಬೆಂಬಲಿಸಿ ನಾವು ಹೆಜ್ಜೆ ಹಾಕಲಿz್ದÉೀವೆ ಎಂದು ಮಾಜಿ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಹೇಳಿಕೆ ನೀಡಿದ್ದಾರೆ.
ಕಲಬುರಗಿಯಿಂದ ರಾಯಚೂರಿಗೆ ಪ್ರಯಾಣ ಬೆಳೆಸುವ ಮುನ್ನ ಅವರು ಶರಣಬಸವೇಶ್ವರ ಮಂದಿರದಲ್ಲಿ ಪೂಜೆ ಸಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ಜಯಕಾರದ ಗೋಷಣೆ ಮೊಳಗಿಸಿದರು. ನೂರಾರು ಕಾರ್ಯಕರ್ತರು ಅಲ್ಲಂಪ್ರಭು ಪಾಟೀಲರಿಗೆ ಬೆಂಬಲವಾಗಿದ್ದರು. ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಮಹಿಳಾ ಕಾಂಗ್ರೆಸ್ನ ಲತಾ ರಾಠೋಡ, ವಾಣಿಶ್ರೀ ಸಗರ, ನೀಲಕಂಠ ಮೂಲಗೆ, ಸೇರಿದಂತೆ ಅನೇಕರು ಇದ್ದರು.
ಕಲಬುರಗಿಯಿಂದ ಭಾರತ ಜೋಡೋದಲ್ಲಿ ಪಾಲ್ಗೊಳ್ಳಲು ಮಾಜಿ ಎಂಎಲ್ಸಿ ತಿಪ್ಪಣ್ಣ ಕಮಕನೂರ್, ಯುವ ಕಾಂಗ್ರೆಸ್ನ ಶಿವಾನಂದ ಹೊ£ಗುಂಟಿಕರ್, ಈರಣ್ಣ ಝಳಕಿ, ಪ್ರವೀಣ ಹರವಾಳ್, ಡಾ. ಕಿರಣ ದೇಶಮುಖ, ಹುಲಿಗೆಪ್ಪ ಕನಕಗಿರಿ, ಬಾಬೂ ಒಂಟಿ, ಪ್ರಶಾಂತ ಬನಾಳೆ, ಚಂದ್ರಿಕಾ ಪರಮೇಶ್ವರ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರ ಪಡೆಯೊಂದಿಗೆ ತೆರಳಿದ್ದಾರೆ.