ಚಿಂಚೋಳಿ: ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಕರ್ನಾಟಕ ರಾಜ್ಯ ಉಣ್ಣೆ ಮತ್ತು ಕುರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ ಆರೋಗ್ಯದಲ್ಲಿ ಏರುಪೇರುಆಗಿದ್ದು ಅವರು ಬೇಗಗುಣಮುಖರಾಗಲಿ ಎಂದು ಕುರುಬ ಸಮಾಜದ ಯುವ ಮುಖಂಡ ಹಾಗೂ ಆರೋಗ್ಯ ರಕ್ಷ ಸಮಿತಿ ಸದಸ್ಯ . ಚಿಂಚೋಳಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅಭಿಷೇಕ ಮಲಕನೂರ ಅವರ ನೇತೃತ್ವದಲ್ಲಿ ಚಿಂಚೋಳಿ ಪಟ್ಟಣದ ಬೀದರ ರಸ್ತೆಯಲ್ಲಿರುವ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತ್ತು.
ಈ ಸಂದರ್ಭದಲ್ಲಿ ಅಭಿಷೇಕ ಮಲಕನೂರ ಮಾತನಾಡಿ ಕರ್ನಾಟಕ ರಾಜ್ಯ ಉಣ್ಣೆ ಮತ್ತು ಕುರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ ಅವರಿಗೆ ಕಾರು ಅಪಘಾತವಾಗಿದ್ದು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಮಾಡಲಾಗಿದೆ ಎಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಲಕ್ಷ್ಮಣ ಭವಾನಿ ಟೈಲರ್, ಮೊಗಲಪ್ಪ ಕರಕಟ್ಟಿ, ಸತೀಷ ಮೊದಿನಪೂರ್, ಕೃಷ್ಣ ಮೊದಿನಪೂರ್, ವಿಜಯಕುಮಾರ ಕರಕಟ್ಟಿ, ಶಾಮಣ್ಣಾ ಬೀರಾಪೂರ್ , ಕೀರಣ ಸುಣಗಾರ, ಜಗದೀಶ ಮಾಳಾಪೂರ್ ಮನೂಜ ಮಾಳಪೂರ ಸಚಿನ್ ಗುತಪಾಲ ಅಂಕುಶ ಕಟಿಗೆರ ಆಕಾಶ ಮಾಳಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು