ಸುರಪುರ: ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು ಮತ್ತು ಹಂತ ಹಂತವಾಗಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪಾಲಿಕೆ,ನಗರಸಭೆ,ಪುರಸಭೆ ಮತ್ತು ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಘಟಕ ದಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಎರಡನೇ ದಿನವೂ ಮುಂದುವರೆದಿದೆ.
ಧರಣಿಯಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಜಗದೀಶ ಶಾಖನವರ್,ಮುಖಂಡರಾದ ಮೌನೇಶ ಕಟ್ಟಿಮನಿ,ಅಯ್ಯಣ್ಣ ಪೂಜಾರಿ,ಅನಿಲಕುಮಾರ ನಾಯಕ,ಬಸವರಾಜ ರತ್ತಾಳ,ಸತೀಶಕುಮಾರ ನಾಯಕ,ಗೋಪಾಲ ಸತ್ಯಂಪೇಟೆ,ಶರಣಬಸವ ಮಲ್ಲಿಭಾವಿ,ಮಹ್ಮದ್ ಅನ್ವರ ಸಾಹೇಬ್,ರಾಘವೇಂದ್ರ ಸುರಪುರಕರ್,ಮಲ್ಲಿಕಾರ್ಜುನ ಹುಲ್ಪೇನವರ್,ನಾಗರಾಜ ನಾಯಕ,ವಿನೋದ ಬಲ್ಲಿದವ,ಪರಶುರಾಮ ಪೂಜಾರಿ,ವೆಂಕಟೇಶ ಪೂಜಾರಿ,ಬಸವರಾಜ ನಾಯಕ ಹಾಗೂ ಬೀದಿ ದೀಪ ನಿರ್ವಹಣೆ ಕಾರ್ಮಿಕರಾದ ಸಿದ್ದಾರೂಢ ಜೇರಬಂಡಿ,ಮುರಳಿಧರ ಸುರಪುರ,ಕಾಶೀಂ,ರಿಯಾಜ್ ಗುಡಗುಂಟಿ ಸೇರಿದಂತೆ ಅನೇಕರಿದ್ದರು.