ದಿ. ದೇವರಾಯ ನಾಡೇಪಲ್ಲಿಗೆ ಶ್ರದ್ಧಾಂಜಲಿ

0
18

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಜಿಲ್ಲಾ ವೀರಶೈವ ಸಮಾಜದಿಂದ ದಿ. ದೇವರಾಯ ನಾಡೇಪಲ್ಲಿ ಅವರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೀರಶೈವ ಸಮಾಜದ ಏಳಿಗೆಗಾಗಿ ತಮ್ಮ ಜೀವನವೇ ಮುಡಿಪಾಗಿಟ್ಟು ನಿಸ್ವಾರ್ಥ ಸೇವೆ ಮಾಡಿದ ದೇವರಾಯ ನಾಡೇಪಲ್ಲಿ ಲಿಂಗೈಕ್ಕೆ ರಾಗಿದ್ದು ವೀರಶೈವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಅರುಣಕುಮಾರ ಪಾಟೀಲ್ ಮಾತನಾಡಿದರು.

Contact Your\'s Advertisement; 9902492681

ಶ್ರೀಯುತರು ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷರಾಗಿ, ಅ. ಭಾ ವಿ. ಮಹಾ ಸಮಾಜದ ರಾಷ್ಟ್ರೀಯ ಉಪಾಧ್ಯಕ್ಷರಾಗಿ. ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಅವರನ್ನು ಕಳೆದುಕೊಂಡು ಮಹಾಸಭಾ ತುಂಬಲಾರದ ನಷ್ಟವಾಗಿದೆ. ಎಂದು ಅಖಿಲ ಭಾರತ ವೀರಶೈವ ಮಹಾ ಸಮಾಜದ ಜಿಲ್ಲಾ ಅಧ್ಯಕ್ಷ ಶರಣಕುಮಾರ ಮೋದಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಲ್ಯಾಣಪ್ಪ ಪಾಟೀಲ್, ಶ್ರೀಶೈಲ್ ಘೋಳಿ, ಶರಣು ಬುಸನೂರ, ಮಲ್ಲಿನಾಥ್ ಪಾಟೀಲ್ ಕಾಳಗಿ, ಜಗನ್ನಾಥ ಪಟ್ಟಣಶೇಟ್ಟಿ, ಶರಣಗೌಡ ಪಾಳಾ, ವೀರಣ ಹೋನಳ್ಳಿ, ರಾಜು ನಾಗನಹಳ್ಳಿ, ಶರಣು ಸೇರಿದಂತೆ ಅನೇಕ ವೀರಶೈವ ಸಮಾಜದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here