ಕಲಬುರಗಿ: ಸ್ವಾತಂತಂತ್ರ್ಯ ವೀರಯೋಧರಗಿದ್ದ ಲಿಂ. ಗಂಗಬಾಯಿ ದೇವರಾಯ ಮಾಲಿ ಪಾಟೀಲ ಅವರು ಬದುಕಿದ್ದಾಗ ಹೇಳಿದ ಹೈಕ ವಿಮೋಚನಾ ಹೋರಾಟಇತಿಹಾಸವನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಡಿ. ಮಾಲಿಪಾಟೀಲ ಒತ್ತಾಯಿಸಿದರು.
ಪ್ರೊ. ಶಿವರಾಜ ಪಾಟೀಲ ಅವರು ಬರೆದಅವ್ವ ಹೇಳಿದ ವಿಮೋಚನಾ ಚಳವಳಿ ಇತಿಹಾಸ ಪುಸ್ತಕದಲ್ಲಿ ಈ ಪ್ರದೇಶದರೋಚಕಇತಿಹಾಸವಿದ್ದು, ಇದನ್ನು ಪಠ್ಯಕ್ಕೆ ಅಳವಡಿಸುವುದರಿಂದ ಮಕ್ಕಳಿಗೆ ನಮ್ಮಇತಿಹಾಸಗೊತ್ತಾಗಲಿದೆಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೈಕ ಇತಿಹಾಸರಚನಾ ಸಮಿತಿರಚನೆಗೊಂಡು ಬಹು ವರ್ಷ ಗತಿಸಿದರೂ ಒಂದುಇತಿಹಸಕೃತಿಕೂಡಈವರೆಗೆ ಬೆಳಕಿಗೆ ಬಂದಿರುವುದಿಲ್ಲ. ಗುಲ್ಬರ್ಗ ವಿವಿಯಲ್ಲಿಅಧ್ಯಯನ ಪೀಠ ಸ್ಥಾಪನೆಯಾಗಿದ್ದರೂರಚನಾತ್ಮಕಕಾರ್ಯಆಗದಿರುವುದು ನೋವಿನ ಸಂಗತಿ ಎಂದರು.
ಸರ್ಕಾರ ಈ ಕೃತಿಯನ್ನುಅಧಿಕೃತಇತಿಹಾಸದಾಖಲೀಕರಣವೆಂದು ಘೋಷಿಸಿ ಕೆಕೆಆರ್ಡಿಬಿಯಿಂದಖರೀದಿಸಬೇಕು. ಕಲ್ಯಾಣಕರ್ನಾಟಕ ಭಾಗದಎಲ್ಲ ಸಾರ್ವಜನಿಕ ಗ್ರಂಥಾಲಯಗಳಿಗೆ ಈ ಕೃತಿಯನ್ನು ಸರಬರಾಜು ಮಾಡಬೇಕುಎಂದು ಒತ್ತಾಯಿಸಿದ ಅವರು, ಗುಲ್ಬರ್ಗವಿವಿಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನಾಗಿಸಬೇಕುಎಂದು ತಿಳಿಸಿದರು.ಪ್ರೊ.ಶಿವರಾಜ ಪಾಟೀಲ ಇದ್ದರು.