ಸೀತನೂರ ಗ್ಯಾಲರಿ ಲೋಕಾರ್ಪಣೆ

0
6

ಕಲಬುರಗಿ: ನಗರದ ಸೀತನೂರ ಸೀತನೂರ ಆರ್ಟ ಗ್ಯಾಲರಿ ಈಚೆಗೆ ಲೋಕಾರ್ಪಣೆಗೊಂಡಿತು. ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಕರ್ನಾಟಕ ಲಲಿಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ ಎಂ.ಎಸ್.ಮೂರ್ತಿ ಮಾತನಾಡಿ, ಕಲಾವಿದರೂ ಕುಟುಂಬದ ಕಡೆಗೆ ಗಮನ ಹರಿಸದೆ ಉತ್ತಮ ಚಿತ್ರಗಳನ್ನು ಬಿಡಿಸುತ್ತಾರೆ. ಒಂದು ಚಿತ್ರ ಬಿಡಿಸಲು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಚಿತ್ರಕಲಾವಿದರ ಶ್ರಮಕ್ಕೆ ತಕ್ಕಂತೆ ಫಲ ಸಿಗುತ್ತಿಲ್ಲ ಕಳವಳ ವ್ಯಕ್ತಪಡಿಸಿದರು.

ಆನೆಗುಂದಿ ಮಹಾ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮೀಜಿ, ಬ್ರಹ್ಮಪೂರ ಏಕದಂಡಿ ಮಠದ ಶ್ರೀ ಸುರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯನಗರ ಸಾಮ್ರಾಜ್ಯದ ವಂಶಸ್ಥ ಶ್ರೀಕೃಷ್ಣದೇವರಾಯಲು ಅವರು ಗ್ಯಾಲರಿ ಲೋಕಾರ್ಪಣೆ ಮಾಡಿದರು.
ಅಂತರಾಷ್ಟ್ರೀಯ ಕಲಾವಿದ ವಾಸುದೇವ ಕಾಮತ, ರಾಘವೇಂದ್ರ ಮೈಲಾಪುರ ಮೋಹನ ಸೀತನೂರ ವೇದಿಕೆ ಮೇಲೆ ಇದ್ದರು. ನಾಡೋಜ ಡಾ ಜೆ.ಎಸ್.ಖಂಡೇರಾವ ಅಧ್ಯಕ್ಷತೆವಹಿದ್ದರು. ಶಾಂತಾ ಭೀಮಸೇನರಾವ ಹಾಗೂ ಡಾ ಅಶೋಕ ಶಟಕಾರ ಕಾರ್ಯಕ್ರಮ ನಿರೂಪಿಸಿದರು.

Contact Your\'s Advertisement; 9902492681

ಸೀತನೂರ ಪರಿವಾರದವರು ನಗರದ ಹಿರಿಯ ಕಿರಿಯ ಚಿತ್ರಕಲಾವಿದರು,ಸಾಹಿತಿಗಳು, ಗಣ್ಯರು ಮುಂತಾದವರು ಇದ್ದರು.
ಮೋಹನ ಸೀತನೂರ ಅವರ ಕಲಾಯಾನ ಹಿನ್ನೋಟ ಪ್ರದರ್ಶನವು ಏಪ್ರಿಲ್4 ರವರೆಗೆ ಬೆಳ್ಳಗ್ಗೆ 11-00ಗಂಟೆಯಿಂದ ಸಂಜೆ 7-00ಗಂಟೆವರೆಗೆ ಸಾರ್ವಜಿಕರು ಕಲಾಸ್ತಕರು ವಿಕ್ಷೀಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here