ಕಲಬುರಗಿ ದಕ್ಷಿಣ; ಕೈ ಹಿಡಿದ ಕಾರ್ಯಕರ್ತರು

0
15

ಕಲಬುರಗಿ; ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲರ ಹಲವರು ವಿವಿಧ ಪಕ್ಷಗಳು ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಭಾನುವಾರ ಕಲಬುರಗಿ ದಕ್ಷಿಣ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಜುಗೌಡ ಪಾಟೀಲರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇವರೊಂದಿಗೆ ರಾಜನಗೌಡ ಪಾಈಲ್, ರಾಜಶೇಖರ, ಚಂದು, ಅಶೋಕ ಕುಲಕರ್ಣಿ, ಅನೀಲ ಮೋಹನರಾವ್, ಪ್ರಕಾಶ ನಂದಿಕೋಲ್, ಶಂಕರ ರಾಠೋಡ, ಮೋಹನ್ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಭಾನುವಾರ ಅಭ್ಯರ್ಥಿ ಅಲ್ಲಂಪ್ರಭು ಪಾಟೀಲರು ಬೆಳಗ್ಗೆಯಿಂದ ಸಂಜೆಯವರೆಗೂ ಸಂಚರಿಸಿದ ನಗರದ ಸಂಗಮೇಶ್ವರ ಕಾಲೋನಿ, ರಾಜಾಪೂರ ಕಾಲೋನಿ, ಚಿಮ್ಮಲಗಿ ಬಡಾವಣೆ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಸಂಚರಿಸಿದ್ದು ಇಲ್ಲೆಲ್ಲಾ ನೂರಾರು ಹಿರಿಯರು, ಯುವಕರು  ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಪಕ್ಷದ ತತ್ವ, ಸಿದ್ದಾಂತಗಳಲ್ಲಿ ನಂಬಿಕೆ ಇಟ್ಟು, ಸ್ಥಳೀಯವಾಗಿ ಅಲ್ಲಂಪ್ರಭು ಪಾಟೀಲರ ಜನಪರ ಧೋರಣೆ ಗಮನದಲ್ಲಿಟ್ಟುಕೊಂಡು ತಾವೆಲ್ಲರೂ ಕಾಂಗ್ರೆಸ್ ಪಕ್ಷ ಸೇರಿ ಹೆಚ್ಚಿನ ಮತಗಳಿಂದ ಕಾಂಗ್ರೆಸ್ ಗೆಲುವಿಎ ಶ್ರಮಿಸುವುದಾಗಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಕಾಂಗ್ರೆಸ್ ಪಕ್ಷದ ಪ್ರಮುಖರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here