ಕಲಬುರಗಿ: ನಗರದ ರಾಷ್ಟ್ರೀಯ ಸಮಾಜ ಪಕ್ಷದ ಕಚೇರಿಯಲ್ಲಿ ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ನೇತೃತ್ವದಲ್ಲಿ ಜಿಲ್ಲಾ ಆರ್.ಎಸ್.ಪಿ ಉಪಾಧ್ಯಕ್ಷ ಬಿ.ವಿ ಕಟ್ಟಿಮನಿ ಕಲಬುರಗಿ, ಶಾಹಾಬಾದ ತಾಲ್ಲೂಕ ಸಂಚಾಲಕ ರಮೇಶ ಕಣಮೇಶ್ವರ ಅವರು ಸೇರ್ಪಡೆಯಾದರು.
ನಂತರ ಶಿವಲಿಂಗಪ್ಪ ಕಿನ್ನೂರ ಅವರು ಮಾತನಾಡುತ್ತಾ ದೇಶದಲ್ಲಿ ರಾಜಕಿಯ ಪಕ್ಷಗಳು ಚುಣಾವನೆಯಲ್ಲಿ ಕೇವಲ ಭರವಸೆ ನೀಡುತ್ತಾ 70-75ವರ್ಷಗಳು ಕಳೇದರು ಬಡ ಜನರಿಗೆ ಮೂಲ ಸೌಲಭ್ಯಗಳ ನೀಡಲು, ಸಮಾಜಿಕ ನ್ಯಾಯ ಪಡೆಯಲು ಕಷ್ಟ ಪಡುತ್ತಿದ್ದಾರೆ. ಈ ಸಮಯದಲ್ಲಿ ಜನರ ಸಮಸ್ಯಗಳ ಪರರಿಹಾರಕ್ಕೆ ಹಾಗೂ ಸಮಾಜಿಕ ಆರ್ಥಿಕ ರಾಷ್ಟ್ರದ ಪ್ರಗತಿಗೆ ರಾಷ್ಟ್ರೀಯ ಸಮಾಜ ಪಕ್ಷ ಚುಣಾವನೆಯಲ್ಲಿ ಸ್ಪರ್ಧಿಸುವ ಹಲವಾರು ಟೀಕಿಟ್ ಅಕಾಂಶಿಗಳಿಗೆ ಪಕ್ಷದ ಸಂರ್ಪಕ ಮಾಡಿದ್ದಾರೆ. ಎಲ್ಲಾ ಮತಕ್ಷೇತ್ರಗಳಲ್ಲಿ ಅಭ್ಯರ್ಥಿಯಾಗಿ ಚುಣಾವನೆ ಕಣದಲ್ಲಿ ಇಳಿಯಲ್ಲಿದ್ದಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ದೇವಿಂದ್ರ ಚಿಗರಳ್ಳಿ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ದೊಡ್ಡಮನಿ, ಜೇವರ್ಗಿ ತಾಲ್ಲೂಕ ಸಂಯೋಜಕ ಮಹಾಂತೇಶ ಅವರಾದ, ಅಫಜಲಪೂರ ಸಂಯೋಜಕ ರಮೇಶ ಜಮಾದರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಮಾವನೂರ ಸೆರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.