ಶಹಾಬಾದ: ತಾಲೂಕಿನ ಸುಕ್ಷೇತ್ರ ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಎಪ್ರೀಲ್ 13 ರಿಂದ 18 ವರೆಗೆ ನಡೆಯಲಿದೆ ಎಂದು ಶ್ರೀಮಠದ ಕಾರ್ಯದರ್ಶಿ ಡಾ.ಗುಂಡಣ್ಣ ಬಾಳಿ ತಿಳಿಸಿದರು.
ಐದು ದಿನಗಳ ಕಾಲ ಅಹೋರಾತ್ರಿ ಭಜನಾ ಕಾರ್ಯಕ್ರಮದ ಜೋತೆಗೆ ಏಪ್ರೀಲ್ 13 ರಂದು ಗುರುವಾರ ಸಾಯಂಕಾಲ 7 ಗಂಟೆಗೆ ವಿವಿಧ ಕಲಾ ತಂಡಗಳೊಂದಿಗೆ ಮತ್ತು ಮಕ್ಕಳ ಸಾಂಸ್ಕøತಿಕ ನೃತ್ಯದೊಂದಿಗೆ ವೈಭವದ ಪಲ್ಲಕ್ಕಿ ಉತ್ಸವ ನಡೆಯಲಿದೆ. ಎಪ್ರೀಲ್ 14 ರಂದು ಶುಕ್ರವಾರ ಬೆಳಿಗ್ಗೆ 5 ಗಂಟೆಯಿಂದ ಸಿದ್ಧಲಿಂಗೆಶ್ವರರ ಕತೃ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ, ಸಹಸ್ರ ಬಿಲ್ವಾರ್ಚನೆಗಳು ನಡೆಯಲಿವೆ.
ಸಂಜೆ 4 ರಿಂದ ಕಳಸಾರೋಹಣ, ಪುರವಂರತ ಆಗಮನ, ನಂದಿಕೋಲ ಕುಣಿತ ನಡೆಯಲಿವೆ. ಸರಿಯಾಗಿ 6-30 ಗಂಟೆಗೆ ವಿವಿಧ ಪೂಜ್ಯರ ಸಮ್ಮುಖದಲ್ಲಿ ಸಾವಿರಾರು ಭಕ್ತರ ನಡುವೆ ವೈಭವದ ರಥೋತ್ಸವ ನಡೆಯಲಿದೆ. 15 ರಂದು ಬೆಳಿಗ್ಗೆ ಮತ್ತು ಸಾಯಂಕಾಲ ಜಂಗಿ ಕುಸ್ತಿಗಳು ನಡೆಯಲಿವೆ. 16 ರಂದು ಸಂಜೆ ಜಾನುವಾರಗಳ ಪ್ರದರ್ಶನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.
18 ರಂದು ಸಂಜೆ ರಥೋತ್ಸವದ ಕಳಸ ಇಳಿಸುವುದರ ಮೂಲಕ ಸಾವಿರಾರು ಭಕ್ತರಿಗೆ ಕಡುಬಿನ ಪ್ರಸಾದದ ವ್ಯವಸ್ಥೆ ಇರುತ್ತದೆ. ಅ ಮೂಲಕ 5 ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುವುದು ಎಂದು ತಿಳಿಸಿದರು.