ಚಿಂಚೋಳಿ: ಚಿಂಚೋಳಿ ತಾಲೂಕಿನ ಚಂದಾಪೂರ ಪಟ್ಟಣದ ಆಶ್ರಯ ಕಾಲೂನಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರವರ ೧೩೨ ನೇ ಜಯಂತೋತ್ಸವ ಕಾರ್ಯಕ್ರಮ ಜರುಗಿತು.
ಈ ವೇಳೆ ಮಾತನಾಡಿದ ಸಮಾಜ ಸೇವಕ ಮಾರುತಿ ಗಂಜಗಿರಿಯವರು ನಿಜವಾಗಿ ಅಂಬೇಡ್ಕರವರ ಅನುಯಾಯಿಗಳಾದ ನಾವುಗಳು ಕೇವಲ ವರ್ಷಕೊಮ್ಮೆ ಡಾ.ಬಿ.ಆರ್ ಅಂಬೇಡ್ಕರವರ ಜಯಂತೋತ್ಸವ ಕಾರ್ಯಕ್ರಮ ಮಾಡಿದರೆ ಸಾಲದು ಅವರು ಹಾಕಿಕೊಟ್ಟಂತ ಮಾರ್ಗದಲ್ಲಿ ನಡೆಯುತ್ತ ಅವರು ಕಂಡಂತ ಕನಸ್ಸು ನನಸು ಮಾಡಬೇಕಾದರೆ ಅವರ ಹೇಳಿಕೊಟ್ಟಂತ ಮಾರ್ಗದಲ್ಲಿ ಸಂವಿಧಾನವನ್ನರಿತು ನಡೆದಾಗ ಮಾತ್ರ ಸಾದ್ಯವೆಂದರು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಕಲ್ಲಮ್ಮಾ ಪಾಟೀಲ ಧ್ವಜಾರೋಹಣ ನೆರವೇರಿಸಿದರು.
ಸುವರ್ಣ ದಸ್ತಮ್ಮಾ ಸರಸ್ವತಿ ಕಮಲಮ್ಮ ಪದ್ಮಾವತಿ ಜಗಮ್ಮಾ ಕಾಶಮ್ಮಾ ಗಂಗಮ್ಮಾ ಚಂದ್ರಕಲಾ ಗುಂಡಮ್ಮ ಈಶ್ವರಿ ಬಕ್ಕಮ್ಮಾ ಶೇಷಮ್ಮಾ ಅನೀತಾ ಶಾರಮ್ಮಾ ರವರು ಅಂಬೇಡ್ಕರ್ ಕ್ರಾಂತಿ ಗೀತೆ ಹಾಡಿದರು ಸಿದ್ದು ರಂಗನೂರ ಕಮಲಕಾರ ಹೂವಿನಬಾವಿ ವಿಜ್ಞೇಶ ಶ್ರೀಕಾಂತ ಸುರೇಶ ತಿರ್ಲಾಪೂರ ಉಲ್ಲಾಸ ಈಶ್ವರ ತಾಡಪಳ್ಳಿ ಶರಣು ಅನೀಲ ಅಭಿಷೇಕ ಬಾಗೇಶ ನಾಗೇಂದ್ರಪ್ಪಾ ಪ್ರಭು ಶಾಮರಾವ ಸತೀಷ ಮನೋಹರ ಮುಂತಾದವರು ಉಪಸ್ಥಿತರಿದ್ದರು.