ಕಲಬುರಗಿ: ಕರ್ನಾಟಕ ವಿದ್ಯಾ ವರ್ಧಕ ಸಂಘ ಧಾರವಾಡ ಅವರು ಕವಿ ಬಿ.ಕೆ.ಹೊಂಗಲ ದತ್ತಿ ನಿಧಿ ಹೆಸರಿನಲ್ಲಿ ಕೊಡ ಮಾಡು ತ್ತಿರುವ”ಮಕ್ಕಳ ಶ್ರೇಷ್ಠ ಕವಿ” ಪ್ರಶಸ್ತಿಗೆ ಈ ಸಲ ಅಂದರೆ ,2023ನೇ ಸಾಲಿನ ಪ್ರಶಸ್ತಿಗೆ ಶ್ರೇಷ್ಠ ಮಕ್ಕಳ ಕವಿ ಎ.ಕೆ. ರಾಮೇಶ್ವರ ಅವರು ಆಯ್ಕೆ ಆಗಿದ್ದಾರೆ.
ಪ್ರಶಸ್ತಿ ಬಿ.ಕೆ. ಹೊಂಗಲ ಅವರ ಜನ್ಮದಿನದ ಏಪ್ರಿಲ್ 20 ರಂದು ಧಾರವಾಡ ವಿದ್ಯಾ ವರ್ಧಕ ಸಂಘದಲ್ಲಿ ಪ್ರದಾನ ಮಾಡಲಾಗುವುದೆಂದು ಆಮಂತ್ರಣ ಪತ್ರದೊಂದಿಗೆ ಕರ್ನಾಟಕ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.