ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಹಲ್ಲೆ: ಬಳೂಂಡಗಿ ಖಂಡನೆ

0
533

ಚಿತ್ತಾಪುರ: ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್ ಅವರ ಮೇಲೆ ಶಿಕ್ಷಕ ಮಲ್ಲಿನಾಥ ಹಲ್ಲೆ ಮಾಡಿರುವುದು ಖಂಡನೀಯ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ತಾಲೂಕಿನ ದೇವಾಜಿ ತಾಂಡ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲಿನಾಥ ಅವರು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ನೂರ್ ಅವರ ಮನೆಗೆ ರಾತ್ರಿ 8:00ಗಂಟೆಗೆ ನುಗ್ಗಿ ಬಕೇಟ್ ನಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ.

Contact Your\'s Advertisement; 9902492681

ಶಿಕ್ಷಕನಾಗಿ ಗುಂಡಾವರ್ತನೆ ಮಾಡುವುದಲ್ಲದೆ ಈ ರೀತಿ ಅಮಾನವೀಯವಾಗಿ ಹಲ್ಲೆ ಮಾಡಿರುವುದರಿಂದ ತಲೆಗೆ ಗಾಯವಾಗಿ ಏಳು ಟಾಕಿಗಳು ಬಿದ್ದವೆ.ಈ ಕೃತ್ಯ ಶಿಕ್ಷಕ ವೃತ್ತಿಗೆ ಕಳಂಕ ತಂದು ಶಿಕ್ಷಕ ಸಮುದಾಯ ತಲೆ ತಗ್ಗಿಸುವಂತಾಗಿದೆ.

ಗುರುವಿನ ಸ್ಥಾನದಲ್ಲಿದ್ದು,ಇಂತಹ ಹೇಯ ಕೃತ್ಯ ವೆಸಗಿರುವುದು ತುಂಬಾ ನೋವಿನ ಸಂಗತಿ.ತಪ್ಪಿತಸ್ಥ ಶಿಕ್ಷಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೇಲಾಧಿಕಾರಿಗಳಿಗೆ ನೌಕರರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳಾದ ಚಂದ್ರಮ ಅಮ್ಮನಗಡೆ, ಪರಶುರಾಮ, ಬಸಪ್ಪ ಯಂಬತ್ನಾಳ್,ರಮೇಶ ಪತ್ತಾರ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here