ಕಲಬುರಗಿ ಜಿಲ್ಲೆ ಕಾಳಗಿ ಪಟ್ಟಣದ ಆರಾಧ್ಯ ದೈವ ಶ್ರೀ ನೀಲಕಂಠ ಕಾಳೇಶ್ವರ ರಥೋತ್ಸವವು ಶ್ರೀ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು ಭರತನೂರ, ಶ್ರೀ ನೀಲಕಂಠ ಮರೀದೇವರು ಸಂಸ್ಥಾನ ಹಿರೇಮಠ ಕಾಳಗಿ, ಹಾಗೂ ವೀರಭದ್ರಪ್ಪ ಮುತ್ಯಾ ಡೋಣ್ಣುರ ಪೂಜ್ಯರ ದಿವ್ಯ ಉಪಸ್ಥಿತಿಯಲ್ಲಿ, ಸತತ 2ನೇ ವರ್ಷ ಹಂಗಾಮಿ ಅಧ್ಯಕ್ಷರಾದ ಶ್ರೀ ಶಿವಶರಣಪ್ಪ ಕಮಲಾಪುರ್ ಇವರ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಜಯ ಘೋಷಗಳ ಮದ್ಯೆ ಅದ್ದೂರಿಯಾಗಿ ಜರುಗಿತು. ಬುಧವಾರ ಬೆಳಿಗ್ಗೆ 6 ಗಂಟೆಗೆ ವೀರಭದ್ರೇಶ್ವರ ಉಚ್ಚಾಯದೊಂದಿಗೆ ಪುರವಂತರು ಅಗ್ನಿ ಪ್ರವೇಶ ಮಾಡಿದರು.
ಸಾಯಂಕಾಲ 6 ಗಂಟೆಗೆ ಡೊಳ್ಳು, ಹಲಗೆ, ಬಾಜಾ, ಭಜಂರ್ತಿ,ವಾದ್ಯ ಮೇಳಗಳೊಂದಿಗೆ ಆಗಮಿಸಿದ ಕುಂಭ, ಕಳಸ ರಥಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ರಥಕ್ಕೆ ಕಳಸರೋಹಣ ನೆರವೇರಿಸಿ ಪುರವಂತಿಕೆ ಸೇವೆ ಸಲ್ಲಿಸಲಾಯಿತು.
ನಂತರ ಶ್ರೀ ನೀಲಕಂಠ ಮಹಾರಾಜಕೀ ಜೈ ಎಂಬ ಜಯಘೋಷಗಳೊಂದಿಗೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸೇವೆ ಸಲ್ಲಿಸುವ ಮೂಲಕ ರಥೋತ್ಸವ ಅದ್ದೂರಿಯಾಗಿ ಜರುಗಿತು.
ರಥೋತ್ಸವದಲ್ಲಿ ಕಾಳಗಿ ಯುವ ಸೇವಾ ಬಳಗದವರ ಸೇವೆ ಎಲ್ಲಾ ಭಕ್ತರ ಗಮನ ಸೆಳೆಯುವಂತಿತು. ಪಟ್ಟಣ ಹಾಗೂ ವಿವಿಧ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸಿದರು.