ಕಲಬುರಗಿ: ಮತದಾರರಿಗೆ ದೂರವಾಣಿ ಕರೆ ಮಾಡಿ ಬಿಜೆಪಿ ಪರ ಆಕ್ರಮ ಮತಯಾಚನೆ ನಡೆಸಲಾಗುತ್ತಿದ್ದ ಎನ್ನಲಾಗಿದ ಕಾಲ್ ಸೆಂಟರ್ ಮೇಲೆ ಚುನಾವಣಾ ಅಧಿಕಾರಿಗಳು ಧೀಡರ್ ದಾಳಿ ನಡೆಸಿದ್ದಾರೆ.
ನಗರದ ಸಂಗಮ್ ಕಾಂಪ್ಲೆಕ್ಸ್ ನಲ್ಲಿ ಬಿಜೆಪಿ ಕಾಲ್ ಸೆಂಟರ್ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಕಚೇರಿಯನ್ನು ಸೀಜ್ ಮಾಡಿ 40ಕ್ಕೂ ಹೆಚ್ಚು ಕಂಪ್ಯೂಟರ್ ಮತ್ತು ದಾಖಲೆ ಪರಿಶೀಲನೆ ನಡೆಸಿಲಾಗಿದೆ. ಪರವಾನಗಿ ಇಲ್ಲದೇ ಸೆಂಟರ್ ನಲ್ಲಿ 70ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಬೆಳಕಿಗೆ ಬಂದಿದೆ.
ಕಲಬುರಗಿ ಉತ್ತರ ಮತಕ್ಷೇತ್ರದ ಜೆಡಿಯೂ ಅಭ್ಯರ್ಥಿ ಶರಣ ಐಟಿ ಅವರ ದುರಿನ ಮೆರಿಗೆ ಭಾನವಾರ ಮಧ್ಯಾಹ್ನ ಕಾಲ್ ಸೆಂಟರ್ ಮೇಲೆ ಧಾಳಿ ನಡೆಸಲಾಗಿದ್ದು, ಈ ಕುರಿತು ಇದುವರೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.