ಯುವ ಮುಖಂಡ ಸಂತೋಷ ಅವರ ಪ್ರಯತ್ನದಿಂದ ಹಲವರಿಗೆ ಪಿಂಚಣಿ ಮಂಜುರು

0
39

ಕಲಬುರಗಿ: ಕರ್ನಾಟಕ ಸರಕಾರ ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ, ಯುವ ಮುಖಂಡ ಸಂತೋಷ ಮೇಲ್ಮನಿರವರ ಪ್ರಯತ್ನದ ಫಲವಾಗಿ ಕಲಬುರಗಿ ತಹಸೀಲ ಕಛೇರಿಯಿಂದ ಹೀರಾಪೂರದ ರಾಣಮ್ಮ ಮೈಲಾರಿ ಹಾಗರಗುಂಡಗಿ, ಶಾಂತಬಾಯಿ ಪ್ರಭುಲಿಂಗ ಧನ್ನೂರ ಹಾಗೂ ಸುಮಲತಾ ಲೋಕೇಶ ಇನಾಮದಾರ ಇವರಿಗೆ ಸಂಧ್ಯಾ ಸುರಕ್ಷಾ ವೇತನ ವಿಧವಾ ವೇತನ (ರೂ ೬೦೦ ಪ್ರತಿ ತಿಂಗಳು) ಸರಸ್ವತಿ ತಂದೆ ಧರ್ಮಣ್ಣಾ ಭಾವಿಮನಿ ಹಾಗೂ ಮಾಹನಂದಾ ಲಕ್ಷ್ಮಣ ತೆಲ್ಲೂರ ಇವರಿಗೆ ಮನಸ್ವಿನಿ ವೇತನ ಈ ಐದು ಜನ ಅರ್ಹ ಮಹಿಳಾ ಫಲಾನುಭವಿಗಳಿಗೆ ಇತ್ತಿಚೀಗೆ  ಗ್ರೇಡ್-೨ ತಹಸೀಲ್ದಾರ ಶ್ರೀ ಜಗನ್ನಾಥ ಪೂಜಾರಿ, ಉಪ-ತಹಸೀಲ್ದಾರರಾದ ಶ್ರೀ ದೇವೇಂದ್ರ ನಾಡಗಿರಿ ಇವರುಗಳಿಂದ ಮಂಜುರಾತಿ ಆದೇಶ ಪ್ರತಿಗಳನ್ನು ತಹಶೀಲ್ದಾರ ಕಛೇರಿ ಎದುರುಗಡೆ ಕೊಡಿಸಲಾಯಿತು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here