ಇಲ್ಲದ ಸಬೂಬು ಹೇಳಿ ಜೆಡಿಎಸ್‍ಗೆ ರಾಜೀನಾಮೆ ನೀಡಿರುವುದು ದುರಂತ

0
68

ಶಹಾಬಾದ: ಸುಮಾರು 30 ವರ್ಷಗಳಿಂದ ಜೆಡಿಎಸ್ ಪಕ್ಷ ಎಲ್ಲಾ ಸ್ಥಾನಮಾನಗಳನ್ನು ನೀಡಿದರೂ, ಜೆಡಿಎಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಉಪಾಧ್ಯಕ್ಷ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ದುರಂತ ಎಂದು ಯುವ ಜೆಡಿಎಸ್ ಅಧ್ಯಕ್ಷ ಮಹ್ಮದ್ ಅಜರ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಬಾರಿ ಅಬ್ದುಲ್ ಗನಿ ಸಾಬೀರ ಅವರನ್ನು ಜೆಡಿಎಸ್ ತಾಲೂಕಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ.ಆದರೆ ಇವರಿಗೆ ಇನ್ನೂ ತಾವೇ ಅಧ್ಯಕ್ಷರಾಗಿ ಮುಂದುವರೆಯಬೇಕೆಂದು ದಾಹ ಇತ್ತು. ತಾವು ಅಂದುಕೊಂಡಿದ್ದು ನಡೆಯದಿದ್ದಾಗ ಇಲ್ಲದ ಸಬೂಬು ಹೇಳುತ್ತಿದ್ದಾರೆ. ಹಿರಿಯರಾದವರು ಮತ್ತೊಬ್ಬರಿಗೆ ಮಾರ್ಗದರ್ಶನ ಮಾಡಬೇಕು.ಅದನ್ನು ಬಿಟ್ಟು ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಲಗೈ ಬಂಟರಿಗೆ ಹುದ್ದೆಗಳನ್ನು ನೀಡಿದ್ದಾರೆ.

Contact Your\'s Advertisement; 9902492681

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಅಭ್ಯರ್ಥಿಗೆ ನಿಲ್ಲಿಸಿಲ್ಲ. ನಮಗೆ ಮಾನ್ಯತೆ ನೀಡಿಲ್ಲ ಎಂದು ಒಂದಕ್ಕೊಂಡು ಸಂಬಂಧವಿಲ್ಲದ ಹೇಳಿಕೆ ನೀಡುತ್ತಿದ್ದಾರೆ.ಜೆಡಿಎಸ್ ಪಕ್ಷದ ಜತೆಗೆ ಬೆರೆತಾಗ ಮಾತ್ರ ಮಾನ್ಯತೆ ಸಿಗುತ್ತದೆ. ಈ ಹಿಂದೆ ತಾವು ಯಾರ ಬಲಗೈ ಬಂಟರಾಗಿ ಹುದ್ದೆಯನ್ನು ಅಲಂಕರಿಸಿದ್ದೀರಿ. ಆಗ ನಾವು ಯಾವ ಆರೋಪ ಮಾಡಿರಲಿಲ್ಲ.ಕಾರಣ ನಮಗೆ ಪಕ್ಷದ ಬಲವರ್ಧನೆಯೇ ಮುಖ್ಯವಾಗಿತ್ತು. ಅಧಿಕಾರದ ನಶೆಯಿಂದ ಬಾಯಿಗೆ ಬಂದಂತೆ ಮಾತನಾಡಬಾರದು.

ಅಧಿಕಾರ ಯಾವತ್ತು ಶಾಶ್ವತವಲ್ಲ ಎಂಬುದನ್ನು ಅರಿಯಬೇಕು.ಈಗಾಗಲೇ ಜೆಡಿಎಸ್ ಪಕ್ಷದ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಉಪಾಧ್ಯಕ್ಷ ಅವರು ತಮ್ಮ ಹತ್ತಾರು ಬೆಂಬಲಿಗರು ರಾಜೀನಾಮೆ ನೀಡಿದ್ದಾರೆ.ಪಕ್ಷ ಅವರಿಗೆ ಎಲ್ಲಾ ಸ್ಥಾನಮಾನ ನೀಡಿದೆ.ಪಕ್ಷದಿಂದ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂಬುದು ಮರೆಯಬಾರದು.ಕಾಲ ಮಿಂಚಿಲ್ಲ ಪಕ್ಷಕ್ಕೆ ಮರಳುವವರಿಗೆ ಯಾವತ್ತಿಗೂ ಸ್ವಾಗತಿಸುತ್ತೆವೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here