ವಿಜಯಪುರದಲ್ಲಿ ಹೈದರ್ ನದಾಫ್ ಹತ್ಯೆ; ಕೊಲೆಗಡುಕರನ್ನು ಬಂಧನಕ್ಕೆ ಆಗ್ರಹ

0
150

ಸುರಪುರ: ವಿಜಯಪುರ ಜಿಲ್ಲೆಯ ಪಿಂಜಾರ ನದಾಫ್ ಸಮುದಾಯದ ಮುಖಂಡ ಹೈದರ್ ನದಾಫ್ ಹತ್ಯೆ ಖಂಡನೀಯವಾಗಿದ್ದು,ತಕ್ಷಣ ಕೊಲೆಗಡುಕರನ್ನು ಬಂಧಿಸಿ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯ ಉಪಾಧ್ಯಕ್ಷರಾದ ಸೋಪಿಸಾಬ ಡಿ ಸುರಪುರ ಆಗ್ರಹಿಸಿದ್ದಾರೆ.

ಈ ಕುರಿತಾಗಿ ಸುರಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ವಿಜಯಪುರ ನಗರಸಭೆ ಪಕ್ಷೇತರ ಸದಸ್ಯೆ ನಿಶತ್ ನದಾಫ್ ಅವರ ಪತಿ ಹೈದರ್ ನದಾಫ್ ಹತ್ಯೆ ಖಂಡನೀಯ. ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು.

Contact Your\'s Advertisement; 9902492681

ಕೊಲೆಗಡುಕರ ಪಕ್ಷ,ಜಾತಿ, ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಇದು ಅಲೆಮಾರಿ ಸಮುದಾಯವನ್ನು ಕುಗ್ಗಿಸುವ ಹುನ್ನಾರವಾಗಿದ್ದು, ಕೂಡಲೇ ಇವರನ್ನು ಬಂಧಿಸಬೇಕೆಂದು ರಾಜ್ಯ ಉಪಾಧ್ಯಕ್ಷ ಸೋಪಿಸಾಬ ಡಿ ಸುರಪುರ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here