ಪ್ರಿಯಾಂಕ್ ಖರ್ಗೆ ಗೆಲುವಿಗೆ ಅಭಿಮಾನಿಗಳ ಸಂಭ್ರಮ

0
22

ಶಹಾಬಾದ: ವಿಧಾನ ಸಭಾ ಚುನಾವಣೆಯಲ್ಲಿ ಚಿತ್ತಾಪೂರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂಭ್ರಮಾಚರಿಸಿದರು.

ಕಲಬುರಗಿ ನಗರದ ಪ್ರಿಯಾಂಕ್ ಖರ್ಗೆ ಮನೆಯ ಹತ್ತಿರ, ಭಂಕೂರ ಸೇರಿದಂತೆ ವಿವಿಧ ಗ್ರಾಮದ ವೃತ್ತಗಳಲ್ಲಿ, ಹೊನಗುಂಟಾ, ಮಾಲಗತ್ತಿ, ಮುತ್ತಗಾ ಹೀಗೆ ಅನೇಕ ಕಡೆಗಳಲ್ಲಿ ಪ್ರಿಯಾಂಕ್ ಖರ್ಗೆ ಗೆಲುವಿಗೆ ಪಟಾಕಿ ಸಿಡಿಸಿ,ಗುಲಾಲು ಎರಚಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ಕುಣಿದಾಡಿದರು.

Contact Your\'s Advertisement; 9902492681

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ತಮ್ಮ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಮಣಿಕಂಠ ರಾಠೋಡ ಅವರಿಗಿಂತ 15750 ಮತಗಳ ಅಂತರ ದಿಂದ ಗೆಲುವು ಸಾಧಿಸಿದ್ದಾರೆ.

ಮುಖಂಡರಾದ ಶಿವಾನಂದ್ ಪಾಟೀಲ್, ಶರಣಬಸಪ್ಪ ಧನ್ನಾ, ಸುರೇಶ್ ಮೆಂಗನ್, ಅಜಿತ್‍ಗೌಡ ಪೆÇಲೀಸ್ ಪಾಟೀಲ್, ಜಾಕಿರ್ ಹುಸೇನ್, ಮುನ್ನಾ ಪಟೇಲ್, ಭರತ್ ಧನ್ನಾ, ಭೀಮರಾವ್ ಶಿರಗುಂಡ, ಭೀಮಯ್ಯ ಗುತ್ತೇದಾರ್, ಕಾಸಿಂ ಪಟೇಲ್ ಆಂದೋಲ, ರಮೇಶ್ ಕಾಳೂರ್, ಸಂದೀಪ್ ಕಂಠಿ, ದೇವೇಂದ್ರ ಹೊಸಮನಿ ಹಾಗೂ ಇತರರು ಪಾಲ್ಗೊಂಡಿದ್ದರು.

ಭಂಕೂರ ಗ್ರಾಮ: ಮುಜಾಹಿದ್ ಹುಸೇನ್,ಮ ನಿಂಗಣ್ಣ ನಂದಳ್ಳಿ, ನಾಗೇಂದ್ರ ಕಂಠಿ, ಸಿದ್ದಮ್ಮ ದೇವನ, ಸಾವಿತ್ರಿ ಮಾಲಗತ್ತಿ, ವಿಜಯಕುಮಾರ ಮುತ್ತಗಿ ಇತರರು ಇದ್ದರು.

ಹೊನಗುಂಟಾ ಗ್ರಾಮ: ಭೀಮುಗೌಡ ಖೇಣಿ, ಪೀರಪಾಶಾ,ರುದ್ರಗೌಡ, ದೇವೆಂದ್ರ ಕಾರೊಳ್ಳಿ,ಅನೀಲ ಅಲ್ಲಂಶೆಟ್ಟಿ, ಸಿದ್ದು ವಾರಕರ್, ಮೆಹಬೂಬ ಪಟೇಲ್, ಮಲ್ಕಪ್ಪ ಮುದ್ದಾ,ರಾಯಪ್ಪ ಮಿಣಜಗಿ, ಬಸಪ್ಪ ಮೇತ್ರೆ, ಮಹಾದೇವ ಮೇತ್ರೆ, ಜೈಭೀಮ, ಪೂಜಪ್ಪ ಮೇತ್ರೆ, ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here