ಶಹಾಬಾದ: ರಾಜ್ಯವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಸಮರ್ಥ ಹಾಗೂ ಅನುಭವಿ ನಾಯಕ ಎಂದರೆ ಸಿದ್ದರಾಮಯ್ಯ.ಆದ್ದರಿಂದ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ತಾಲೂಕಾ ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಈಗಾಗಲೇ ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ದೇಶ ಮೆಚ್ಚುವ ರಿತೀಯ ಸರಕಾರ ಕೊಟ್ಟಿದ್ದಾರೆ.ಯಾವುದೇ ಕಪ್ಪ ಚುಕ್ಕೆ ಇಲ್ಲದೆ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ್ದಾರೆ.ಅವರೊಬ್ಬ ಉತ್ತಮ, ಸಮರ್ಥ ಮತ್ತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಾಗೂ ಜನರ ನೀರಿಕ್ಷಗೆ ತಕ್ಕಂತೆ ಕೆಲಸ ಮಾಡುವ ನಾಯಕ.ಆದ್ದರಿಂದ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.