ಭಕ್ತಿ ಮಾರ್ಗದಿಂದ ಮುಕ್ತಿ ಸಾಧನೆ ಸಾಧ್ಯ: ದಾಸಬಾಳ ಶ್ರೀ

0
39

ಯಾದಗಿರಿ: ಭಕ್ತಿ ಮಾರ್ಗದಿಂದ  ಮಾತ್ರ ಮುಕ್ತಿ ಸಾಧಿಸಲು ಸಾಧ್ಯ ಎಂದು ದಾಸಬಾಳ ಮಠದ ಸದ್ಗುರು ಶ್ರೀ ವಿರೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹೊರವಲಯದಲ್ಲಿರುವ ಸದ್ಗುರು ಶ್ರೀ ವೀರೇಶ್ವರ ಮಹಾಸ್ವಾಮಿಗಳು ದಾಸವಾಳ ಮಠದಲ್ಲಿ ಮಾಸಿಕ ಪೌರ್ಣಿಮೆಯಂದು ಶಿವಾನುಭವಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಸಮಾರಂದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಮನುಷ್ಯನಿಗೆ ನೆಮ್ಮದಿಯ ಬದುಕು ಸಾಗಿಸಬೇಕೆಂದಿದ್ದರೆ ಅದು ಧರ್ಮಾಚರಣೆಯಿಂದ ಮಾತ್ರ ಸಾಧ್ಯ ಎಂದು ಅವರು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ತಾಲೂಕ ವೀರಶೈವ ಮಹಾಸಭಾ ಅಧ್ಯಕ್ಷ ಆರ್.ಮಹಾದೇವ ಅಬ್ಬೆತುಮಕೂರ, ನಗರ ವೀರಶೈವ ಮಹಾಸಭಾ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಸವಂತರಾಯಗೌಡ ಮಾಲಿಪಾಟೀಲ್ ನೂರಂದಪ್ಪ ಲೇವಡಿ ಅವರನ್ನು ಶ್ರೀಗಳು ಮಠದ ವತಿಯಿಂದ ಸನ್ಮಾನಿಸಿ ಆಶೀರ್ವದಿಸಿ ಗೌರವ ಗುರು ರಕ್ಷೆ ನೀಡಿದರು.

ಮುಖಂಡ ಶಿವರಾಜ ಜಕಾತಿ ನಿರೂಪಿಸಿದರು. ಸೂಗುರೇಶ್ವರ ಮಾಲಿಪಾಟೀಲ್ ಸ್ವಾಗತಿಸಿ ಕೊನೆಗೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here