ವಿದ್ಯುತ್ ವ್ಯತ್ಯಾಯ ಖಂಡಿಸಿ ಎಪಿಎಂಸಿ ವರ್ತಕರಿಂದ ಪ್ರತಿಭಟನೆ

0
12

ಕಲಬುರಗಿ: ನಗರದ ಗಂಜ್ ಪ್ರದೇಶದ ಎಪಿಎಂಸಿ ನಲ್ಲಿ ಕಳೆದ 4-5 ದಿನಗಳಿಂದ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ವ್ಯಾಪಾರ ವಹಿವಾಟಿಗೆ ವಿಪರೀತ ತೊಂದರೆಯಾಗುತ್ತಿದ್ದು, ಕೂಡಲೇ ವಿದ್ಯುತ್ ಸರಬರಾಜು ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ ನೆಹರು ಗಂಜ ಹಾಗೂ ಎಪಿಎಂಸಿ ವರ್ತಕರ ಸಂಘ, ಹಮಾಲರ ಸಂಘ ಮತ್ತು ಇತರ ಸಿಬ್ಬಂದಿಗಳಿಂದ ನಗರದ ಗಂಜ್ ಪ್ರದೇಶದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

ಸಂಘದ ಅಧ್ಯಕ್ಷ ಶ್ರೀಮಂತ ಉದನೂರ, ಕಾರ್ಯದರ್ಶಿ ಸಂತೋಷ ಲಂಗಾರ, ಹೆಚ್‍ಕೆಸಿಸಿಐ ಅಧ್ಯಕ್ಷ  ಶಶಿಕಾಂತ ಪಾಟೀಲ, ಸಂತೋಷ ನೀನಗಡೆ, ಸಂತೋಷ ಬಾಳಿ, ಸಾದೇವ ಬಿರಾದಾರ, ಅಂಬಾರಾಯ ಜಿವಣಗಿ, ಸಂಗಣ್ಣ ಹಿರೇಗೌಡ, ನಾಗಣ್ಣ ತಿಳಗೂಳ, ಸಂಜೀವಕುಮಾರ ಮುಗಳಿ, ಭೀಮಶಾ ಜಿವಣಗಿ ಅವರು ಸೇರಿದಂತೆ ಹಲವರು ಪಾಲ್ಗೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here