ಲಂಡನ್ ನಲ್ಲಿನ ಬಸವೇಶ್ವರ ಪ್ರತಿಮೆಗೆ ಪ್ರೊ. ದಯಾನಂದ ಅಗಸರ್ ಅವರಿಂದ ಗೌರವ ನಮನ ಸಲ್ಲಿಕೆ

0
487

ಕಲಬುರಗಿ: ಲಂಡನ್ ಪ್ರವಾಸದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ್ ಅವರು ಶನಿವಾರ ಬ್ರಿಟೀಷ್‌ ಸಂಸತ್ತಿನ ಬಳಿ ಇರುವ ಜಗಜ್ಯೋತಿ ‌ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಾಮಾಜಿಕ‌ ಕ್ರಾಂತಿಯ ಹರಿಕಾರನಿಗೆ ಗೌರವ ನಮನ ಸಲ್ಲಿಸಿದರು.

ಬ್ರಿಟನ್ ಸಂಸತ್ತಿನ ಎದುರುಗಡೆ ಬಸವೇಶ್ವರರ ಪ್ರತಿಮೆಯನ್ನು ಕಂಡು ಸಂತಸ ವ್ಯಕ್ತಪಡಿಸಿದ ಪ್ರೊ.ದಯಾನಂದ ಅಗಸರ್ ಅವರು, ಬಸವೇಶ್ವರರ ಮೂರ್ತಿ ಸ್ಥಾಪಿಸುವ‌ ಮೂಲಕ ವಿಶ್ವವ್ಯಾಪಿ ಅವರ ಸಮಾನತೆಯ ಮೌಲ್ಯಗಳನ್ನು ಪ್ರಚಾರ ಮಾಡುತ್ತಿರುವ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. ಥೇಮ್ಸ್ ನದಿಯ ದಡದಲ್ಲಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರವರ್ತಕನ ಪ್ರತಿಮೆಯನ್ನು ನೋಡುವುದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಯುನೈಟೆಡ್ ಕಿಂಗ್‌ಡಂನ ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನ ಮತ್ತು ಬಸವ ಸಮಿತಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಲಂಡನ್‌ ನಗರದ ಮಾಜಿ ಮೇಯರ್ ಮತ್ತು ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಕಲಬುರಗಿ ಮೂಲದ ಡಾ. ನೀರಜ್ ಪಾಟೀಲ್, ಬ್ರಿಟಿಷ್ ಇಂಡಿಯನ್ ಸಮುದಾಯದ ಸದಸ್ಯರು ಮತ್ತು ಯುಕೆ ಮೂಲದ ಗುಲಬರ್ಗಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ‌‌ ಸಂದರ್ಭದಲ್ಲಿ ಅಭಿಜಿತ್ ಸಾಲಿಮಂತ್ ಅವರನ್ನು ಯು.ಕೆ.ಯಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪರವಾಗಿ ಸನ್ಮಾನಿಸಲಾಯಿತು. ಅಭಿಜಿತ್ ಸಾಲಿಮಂತ್ ಅವರು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಅವರ ತಂದೆ ಹುಮನಾಬಾದ್‌ನಲ್ಲಿ ಅಭ್ಯಾಸನಿರತ ವೈದ್ಯರಾಗಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಐತಿಹಾಸಿಕ ಬಸವೇಶ್ವರರ ಪ್ರತಿಮೆಯನ್ನು 2015ರ ನವೆಂಬರ್ 14 ರಂದು ಲಂಡನ್‌ನಲ್ಲಿ ಅನಾವರಣಗೊಳಿಸಿದರು. ಯು.ಕೆ.ಯಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆ ಮತ್ತು ಯುನೈಟೆಡ್ ಕಿಂಗ್‌ಡಂನ ಪ್ರತಿಮೆಗಳ ಕಾಯಿದೆ-1854ರ ಪ್ರಕಾರ ಸಂಸತ್ತಿನ ಸಮೀಪದಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಅನುಮೋದಿಸಿದ ಮೊದಲ ಪರಿಕಲ್ಪನಾ ಪ್ರತಿಮೆಗಳಲ್ಲಿ ಇದು ಒಂದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here