ಪ್ರವಾಹ ಇಳಿಮುಖ ಗ್ರಾಮದತ್ತ ಮುಖ ಮಾಡಿದ ಸಂತ್ರಸ್ತರು

0
88
  • ವರದಿಗಾರ ಬಸವರಾಜ ಸಿನ್ನೂರ.

ಶಹಾಪುರ: ಎರಡು ಮೂರು ದಿನಗಳಿಂದ ಪ್ರವಾಹ ಇಳಿಮುಖವಾದ ಕಾರಣ ಗಂಜಿ ಕೇಂದ್ರದಲ್ಲಿ ಬಂದು ನಿಲ್ಲಿಸಿರುವ ಸಂತ್ರಸ್ತರು ಗ್ರಾಮದತ್ತ ಪ್ರಯಾಣ ಬೆಳೆಸಿದ್ದಾರೆ.

ಮನೆ ಮಾರು ನಾಯಿ ಕೋಳಿ ಕುರಿ ಎಲ್ಲವನ್ನೂ ಬಿಟ್ಟು ಒಂದು ಗಂಜಿ ಕೇಂದ್ರದಲ್ಲಿ ಸಂತ್ರಸ್ತರು ನೆಲೆಸಿದ್ದರು ಸ್ವಲ್ಪ ಮಟ್ಟಿಗೆ ಪ್ರವಾಹ ತಗ್ಗಿದ್ದರಿಂದ ಸಂತ್ರಸ್ತರಿಗೆ ಗ್ರಾಮದ ನೆನಪಾಗಿದೆ.

Contact Your\'s Advertisement; 9902492681

ಹತ್ತಿಗೂಡುರು ಗ್ರಾಮದ ಸರಕಾರಿ ಪ್ರೌಢಶಾಲೆ ಶಾಲೆಯಲ್ಲಿ ಗಂಜಿ ಕೇಂದ್ರದಲ್ಲಿ ಗೌಡೂರು, ಟೊಣ್ಣೂರು, ಕೂಳೂರು ಯಕ್ಷಿಂತಿ ಗ್ರಾಮದ ಜನರಿಗೆ ವಸತಿ ಕಲ್ಪಿಸಲಾಗಿದ್ದು ಸುಮಾರು ಹದಿನೈದು ದಿನಗಳ ಕಾಲ ಅವರು ಇಲ್ಲೇ ವಾಸ ಮಾಡಿದ್ದರು.

ಇನ್ನು ಜಿಲ್ಲಾಡಳಿತ ವತಿಯಿಂದ ಸರಕಾರಿ ಬಸ್ ಗಳ ಮೂಲಕ ಸಂತ್ರಸ್ತರನ್ನು ಗ್ರಾಮಕ್ಕೆ ಕರೆತರಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here