ಚಿತ್ತಾಪುರ ಪೆದ್ದು ಮಠದಲ್ಲಿ ದಿಗ್ಗಾಂವಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ

0
159

ಚಿತ್ತಾಪುರ:ಪಟ್ಟಣದ ಕಡಬೂರ್ ಗಲ್ಲಿಯ ಸಿದ್ದವೀರೇಶ್ವರ ಪೆದ್ದು ಮಠದಲ್ಲಿ ದಿಗ್ಗಾಂವ ಹಿರೇಮಠದ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಕಡ್ಲಿಗಾರ ಹುಣ್ಣಿಮೆಯಂದು ಜುಲೈ 03ರಂದು ಸೋಮವಾರ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ವಕ್ತಾರ ಶರಣು ಉಡಗಿ ಅವರು ತಿಳಿಸಿದ್ದಾರೆ.

ಪಟ್ಟಣದ ಸದ್ಬಕರು ಹಾಗೂ ಅಕ್ಕಮಹಾದೇವಿ ಮಹಿಳಾ ಸಂಘದವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗುರು ವಂದನಾ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ದಿಗ್ಗಾಂವ ಪಂಚಗೃಹ ಹಿರೇಮಠದ ಸಿದ್ಧವೀರ ಶಿವಾಚಾರ್ಯರರು ಸಾನ್ನಿಧ್ಯ ವಹಿಸುವರು. ಕಡ್ಲಿಗಾರ ಹುಣ್ಣಿಮೆಯಂದು ಬೆಳಗ್ಗೆ ಶ್ರೀ ಸಿದ್ದೇಶ್ವರ್ ಕರ್ತೃ ಲಿಂಗಕ್ಕೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಲ ನಂತರ ಸಮಾರಂಭದಲ್ಲಿ ಗುರುಗಳ ಗುರುಪಾದ ಪೂಜೆ, ಗೌರವ ಅರ್ಪಣೆ, ಕಲಾವಿದರಿಗೆ, ಸಾಧಕರಿಗೆ ಗುರುರಕ್ಷೆ ನೀಡಿ ಗೌರವಿಸಲಾಗುವುದು ಎಂದು ಅವರು ಪತ್ರಿಕೆ ಹೇಳಿಕೆಯಲ್ಲಿ ವಿವರಿಸಿದ್ದಾರೆ.

Contact Your\'s Advertisement; 9902492681

ಪಂಡಿತ್ ಜಗದೀಶ್ ಶಾಸ್ತ್ರೀ ಅವರು ಪ್ರವಚನ ಹೇಳುವರು. ಲಿಂ. ಯತಿ ನಾಗಭೂಷಣ್ ಧಾರ್ಮಿಕ ಪಾಠಶಾಲಾ ಶಿಕ್ಷಕರಿಂದ ಸಂಗೀತ ಹಾಗೂ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here