ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ರಾವಣ ಮೇಲೆ ಗುಂಡಿನ ದಾಳಿ: ಆರೋಪಿಗಳ ಬಂಧನಕ್ಕೆ ಆಗ್ರಹ

0
13

ಕಲಬುರಗಿ: ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರ ಮೇಲೆ ನಡೆದ ಕೊಲೆಯತ್ನದ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳಬೇಕೆಂದು ಭೀಮ್ ಆರ್ಮಿ-ಕರ್ನಾಟಕ ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಸೂರ್ಯಕಾಂತ ಜಿಡಗಾ, ಕಾರ್ಯದರ್ಶಿ ಗುಂಡಪ್ಪ ಮಾಳಗೆ, ಜೇವರ್ಗಿ ತಾಲೂಕ ಅಧ್ಯಕ್ಷ ಸುಭಾಷ ಆಲೂರೆ, ಕಮಲಾಪೂರ ತಾಲೂಕ ಅಧ್ಯಕ್ಷ ಸುಧೀರ ಹೊನ್ನಳ್ಳಿ, ಆಳಂದ ತಾಲೂಕ ಕಾರ್ಯಾಧ್ಯಕ್ಷ ಬಸವರಾಜ ಹೆಡೆ, ಚಿತ್ತಾಪೂರ  ತಾಲೂಕ ಅಧ್ಯಕ್ಷ ಶಿವಶರಣ ಕಲ್ಲೂರ, ಚಿತ್ತಾಪೂರ  ತಾಲೂಕ ಅಧ್ಯಕ್ಷ ಶಂಕರ ರದ್ದೆವಾಡಗಿ, ಶಹಾಬಾದ  ತಾಲೂಕ ಅಧ್ಯಕ್ಷ ಹುಸನಪ್ಪಾ ರದ್ದೆವಾಡಗಿ, ಮುಖಂಡ ಸಂದೀಪ ದೊಡ್ಡಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here