ವಚನ ಪಿತಮಹ ಡಾ.ಫ.ಗು. ಹಳಕಟ್ಟಿ ಜಯಂತೋತ್ಸವ; ಸಮಿತಿ ಅಧ್ಯಕ್ಷರಿಗೆ ಸನ್ಮಾನ

0
138

ಕಲಬುರಗಿ: ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ನಿಮಿತ್ತ ವಚನ ಪಿತಮಹ ಡಾ. ಫ. ಗು.ಹಳಕಟ್ಟಿ ಜಯಂತಿ ಗೆ ಜುಲೈ 2 ರಂದು ಸರ್ಕಾರದ ಅಧಿಕೃತ ಆದೇಶ ಮೇರೆಗೆ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಜಯಂತೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ ಗೊಂಡ ಜಯಂತಿ ಸಮಿತಿಯ ಸದಸ್ಯರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ನಿಕಟಪೂರ್ವ ಸಮಿತಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿದ ನ್ಯಾಯವಾದಿ ಶಿವಲಿಂಗಪ್ಪಾ ಅಷ್ಟಗಿ ಯವರು ಮಾತನಾಡಿ ಕಳೆದ ವರ್ಷ ಮೊಟ್ಟ ಮೊದಲು ಕಾರ್ಯಕ್ರಮ ಸರ್ಕಾರ ಹಮ್ಮಿಕೊಂಡ ಪ್ರಯುಕ್ತ ಒಂದು ಶಾಶ್ವತ ಸಮಿತಿ ರಚಿಸಿ ಚಾಲನೆ ನೀಡಿದ್ದೇನೆ. ಎರಡನೇ ವರ್ಷ ಕಾರ್ಯಕ್ರಮಕ್ಕೆ ಸಮಾಜದ ಹಿರಿಯ ಹಿತಚಿಂತಕ, ಲೇಖಕ ಹಾಗೂ ರಾಜ್ಯ ಹಟಗಾರ ಸಮಾಜದ ಸಂಸ್ಥಾಪಕ ಸದಸ್ಯರಾದ ಸೂರ್ಯಕಾಂತ ಸೊನ್ನದ ಆಯ್ಕೆಗೊಂಡಿದ್ದು ಹರ್ಷವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಬೆಳವಣಿಗೆಯಾಗಲಿ ಎಂದು ಬಯಸುತೇನೆ ಎಂದರು.

Contact Your\'s Advertisement; 9902492681

ನ್ಯಾಯವಾದಿ ಹಾಗೂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜಗೋಪಾಲ ಭಂಡಾರಿ ನೇಕಾರರ ಅಸ್ಮಿತೆ ಜಾಗೃತಿಗೊಳ್ಳುತ್ತಿದೆ ಎಂದರು. ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಸಮಿತಿಯ ಸದಸ್ಯರಾದ ಷಣ್ಮುಖಪ್ಪಾ ಮಿಟ್ಟಾ ರವರು ಜಯಂತೋತ್ಸವ ಆಯ್ಕೆ ಗೊಂಡ ಸೊನ್ನದ ರವನ್ನು ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಗೌರವಿಸಿದರು.

ಜಿಲ್ಲಾ ಹಟಗಾರ ಸಮಾಜದ ಕಾರ್ಯದರ್ಶಿ ಜೇನವೆರಿ ವಿನೋದ ಕುಮಾರ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀನಿವಾಸ ಬಲಪೂರ್, ಚಂದ್ರಶೇಖರ್ ಮ್ಯಾಳಗಿ ಸಂತೋಷ ಗುರುಮಿಟ್ಕಲ ಮತ್ತು ವಿಶ್ವರಾಜ ಮಿಟಾ, ಶರಣ ಪ್ರಸಾದ್ ಜೇನವೆರಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here