Monday, July 15, 2024
ಮನೆಬಿಸಿ ಬಿಸಿ ಸುದ್ದಿನೆರೆ ಸಂತ್ರಸ್ತರಿಗೆ ಅಲ್ಪಸಂಖ್ಯಾತರ ವಸತಿ ನಿಲಯ ಹಾಗೂ ಟಿಪ್ಪು ಅಭಿಮಾನಿಗಳಿಂದ ನಿಧಿ ಸಂಗ್ರಹ

ನೆರೆ ಸಂತ್ರಸ್ತರಿಗೆ ಅಲ್ಪಸಂಖ್ಯಾತರ ವಸತಿ ನಿಲಯ ಹಾಗೂ ಟಿಪ್ಪು ಅಭಿಮಾನಿಗಳಿಂದ ನಿಧಿ ಸಂಗ್ರಹ

ಶಹಾಪುರ: ಅತಿವೃಷ್ಟಿ ಅನಾಹುತಕ್ಕೆ ಸಿಲುಕಿದ ಜನತೆಗೆ ಸಹಾಯ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದ್ದು, ಯಾವುದೇ ಜಾತಿಭೇದವಿಲ್ಲದೆ ನಾವೆಲ್ಲರೂ ಈ ನಿಟ್ಟಿನಲ್ಲಿ ಕೈಲಾದ ಸಹಾಯ ಮಾಡಿ ಮನೆ-ಮಠ ಕಳೆದುಕೊಂಡು ಆಹಾರಕ್ಕೆ ಪರದಾಡುತ್ತಿರುವ ಜನರ ರಕ್ಷಣೆಗೆ ಮುಂದಾಗೋಣ ಎಂದು NSUI ಶಹಾಪುರ ಘಟಕದ ಉಪಾಧ್ಯಕ್ಷರಾದ ಶೇಖ ಶೋಯಿಬ್ ಅತ್ತಾರಿ ಹೇಳಿದರು.

ಪಟ್ಟಣದ ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾ ವೇದಿಕೆ ಶಹಾಪುರ ಘಟಕ ಹಾಗೂ ಅಲ್ಪಸಂಖ್ಯಾತರ ವಸತಿ ನಿಲಯ ವಿದ್ಯಾರ್ಥಿಗಳು ಸಹಯೋಗದಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಸಂತ್ರಸ್ತರ ನಿಧಿ ಸಂಗ್ರಹ ಕಾರ್ಯವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಫೈಝನ್ ಚೌಶ, ಮೊಹಮ್ಮದ್ ಹಾಜಿ, ಝುಲ್ಫೇಕರ್, ಸಯೀದ್ ಪಟೇಲ್, ಮಲ್ಲು, ರಫೀಕ್, ಖಾಸಿಂ ಹಾಗೂ ಇತರರು ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular