ಪ್ರೌಢ ಶಾಲಾ ಶಿಕ್ಷಕರಿಗೆ ವೇತನ ಬಡ್ತಿ ಮತ್ತು ವರ್ಗಾವಣೆಯಲ್ಲಿ ಅನ್ಯಾಯ

0
19

ಕಲಬುರಗಿ: ಬಡ್ತಿ ಪ್ರೌಢ ಶಾಲಾ ಶಿಕ್ಷಕರಿಗೆ ವೇತನ ಬಡ್ತಿ ಮತ್ತು ವರ್ಗಾವಣೆಯಲ್ಲಿ ತುಂಬಾ ಅನ್ಯಾಯ ಆಗತ್ತಿದೆ. ಕರ್ನಾಟಕ ನ್ಯಾಯ ಮಂಡಳಿ ಬಡ್ತಿ ಶಿಕ್ಷಕರ ಪರವಾಗಿ ತೀರ್ಪು ನೀಡಿದರು ಸಹ ಸರಕಾರ ಇನ್ನು ಕಾರ್ಯರೂಪಕ್ಕೆ ತರುತ್ತಿಲ್ಲ ಇದರಿಂದ ಬಡ್ತಿ ಶಿಕ್ಷಕರಿಗೆ ಸಿಗಬೇಕಾದ 10, 15, 20, 25 ಮತ್ತು 30 ವರ್ಷಗಳ ವೇತನ ಬಡ್ತಿಯಿಂದ ವಂಚಿತರಾಗುತ್ತಿದ್ದೇವೆ. ಮತ್ತು ವರ್ಗಾವಣೆಯಲ್ಲಿ ಇಂದಿನ ಸೇವೆಯು ಪರಿಗಣಿಸದೆ ಇರುವದರಿಂದ ನಮ್ಮ ಜೇಷ್ಠತೆಯಲ್ಲಿ ಹಿರಿಯರಾದವರು ವರ್ಗಾವಣೆ ಪಟ್ಟಿಯಲ್ಲಿ ನಮಗಿಂತ ಜೇಷ್ಠತೆಯಲ್ಲಿ ಮೇಲಕ್ಕೆ ಇದ್ದು ನಮಗೆ ಬೇಕಾದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ವಂಚಿತರಾಗುತ್ತಿದ್ದೇವೆ ಎಂದು ನಿಕಟಪೂರ್ವ ಅಧ್ಯಕ್ಷ ಸುರೇಶ ಕುಮಸಗಿ ಹೇಳಿದರು.

ಇವರು ನಿನ್ನೆ ಕರ್ನಾಟಕ ರಾಜ್ಯ ಬಡ್ತಿ ಸರಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ಘಟಕದ ನೂತನ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡುತ್ತಾ ತಾವು ಒಂದೂವರೆ ವರ್ಷಗಳಿಂದ ಸತತ ಪ್ರಯತ್ನ ಮಾಡಿದರು ಡಿಪಿಎಆರ್ ಹಾಗೂ ಫೈನಾನ್ಸ್ ಇಲಾಖೆಯು ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲದೆ ಇರುವದು ವಿಷಾದನೀಯ ವಿಷಯವಾಗಿದೆ ಎಂದರು.

Contact Your\'s Advertisement; 9902492681

ರಾಜ್ಯಾಧ್ಯಕ್ಷ ಯಲ್ಲಪ್ಪಗೌಡರು ಮಾಡುವ ಪ್ರಯತ್ನಕ್ಕೆ ನಾವೆಲ್ಲರೂ ಕೈ ಜೋಡಿಸಿ ನಮ್ಮ ಬೇಡಿಕೆಗೆ ಈಡೇರಿಕೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ತಾಲೂಕು ಮಟ್ಟದಿಂದ ಭದ್ರ ಬುನಾದಿ ಹಾಗೂ ಸಂಘಟನೆ ನಡೆಯಲಿ ಇದಕ್ಕೆ ನಾನು ನಿವೃತ್ತನಾದರೂ ನಿಮ್ಮಗಳ ಸಹಾಯಕ್ಕೆ ಸದಾ ಸಿದ್ದನಾಗಿರುವೆ ಎಂದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಾದ ಮಹಾದೇವ ಚೇಂಗಟಿ (ಗೌರವ ಅಧ್ಯಕ್ಷ), ವೆಂಕಟೇಶ ಚಿನ್ನೂರ (ಅಧ್ಯಕ್ಷ), ಶರಣಪ್ಪಾ ಕಟ್ಟಿ (ಉಪಾಧ್ಯಕ್ಷ), ಶಿವಕುಮಾರ ಹೊಸಮನಿ (ಪ್ರಧಾನ ಕಾರ್ಯದರ್ಶಿ), ಸಾಯಿಬಣ್ಣಾ ಲಂಗೋಟಿ (ಕಾರ್ಯದರ್ಶಿ), ಅಶೋಕ ಕೆ., ಸತೀಶಕುಮಾರ ಮಜಗೊಂಡ (ಸಹ ಕಾರ್ಯದರ್ಶಿ), ಮಹಿಬೂಬ ವಾಲಿಕಾರ, ವಿಷ್ಣುಕುಮಾರ (ಸಂಘಟನಾ ಕಾರ್ಯದರ್ಶಿ), ಚಂದ್ರಕಲಾ ಪಾಟೀಲ (ಮಹಿಳಾ ಪ್ರತಿನಿದಿ) ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ದಾದಾಸಾಬ ಹೊಸೂರ, ಲಕ್ಷ್ಮೀಪುತ್ರ ಬಿಂಗೊಳ್ಳಿ, ರಾಜೇಂದ್ರ ಕೊರಬ, ರಾಜಶೇಖರ ಹಸರಗುಂಡಗಿ, ಚಂದ್ರಕಾಂತಾ ಬಿರಾದಾರ, ಶಶಿಕಾಂತ, ದಿಲೀಪ ಚೌಹಾಣ, ಮಹಾದೇವ ಓಕಳಿ, ಭಾಗ್ಯಲತಾ, ತಿಪ್ಪಣ್ಣ ಕಲಕೋರಿ, ಶಿವಲೀಲಾ ಪಾಟೀಲ, ಶಿವಾನಂದ ಹಿರೇಮಠ ಹಾಗೂ ಎಲ್ಲಾ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here