ಕಲಬುರಗಿ; ಕಸ್ತೂರಿ ರಂಗನ್ ವರದಿ ಜಾರಿ ಕುರಿತು ರಾಜ್ಯದ ಅರಣ್ಯ ಖಾತೆ ಸಚಿವರಾಗಿರುವ ಈಶ್ವರ ಖಂಡ್ರೆಯವರು ನೀಡಿರುವ ಹೇಳಿಕೆಯನ್ನು ಖಂಡಿಸಿ ಶಿವಮೊಗ್ಗ ಜಿ¯್ಲÉಯ ತೀರ್ಥಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಅರಗ e್ಞÁನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ಖಂಡ್ರೆಯವರ ಮೈಬಣ್ಣದ ಕುರಿತು ವ್ಯಂಗ್ಯವಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಮಾತುಗಳು e್ಞÁನೇಂದ್ರರಲ್ಲಿ e್ಞÁನ ಅದೆಷ್ಟಿದೆ ಎಂಬುದಕ್ಕೆ ಕನ್ನಡಿ ಹಿಡಿದಿವೆ ಎಂದು ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಅರಗ e್ಞÁನೇಂದ್ರರ ಈ ಹೇಳಿಕೆ ಅವರ ಮಾನಸಿಕ ಮತ್ತು ಬೌದ್ಧಿಕ ದಿವಾಳಿತನವನ್ನು ಪ್ರದರ್ಶಿಸುತ್ತದೆ. ಎಐಸಿಸಿ ಅಧ್ಯP್ಷÀರೂ ಹಾಗೂ ರಾಜ್ಯಸಭೆಯ ವಿರೋಧ ಪP್ಷÀದ ನಾಯಕರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ 5 ದಶಕಗಳ ಸುದೀರ್ಘ ರಾಜಕೀಯ ಬದುಕಲ್ಲಿ ಒಂದೂ ಹಗರಣವಿಲ್ಲದಂತೆ ಬಾಳಿ ಬಂದವರು. ಇಂತಹರನ್ನು ಅವರ ಮೈಬಣ್ಣಕ್ಕೆ ಹೋಲಿಸಿ ಟೀಕಿಸೋದು ಅe್ಞÁನಿಯ ಲಕ್ಷಣ, ಅವರ ಅಪ್ರಬುದ್ಧತೆಗೆ ಸಾಕ್ಷಿ ಎಂದು ಅಲ್ಲಂಪ್ರಭು ಕಟುವಾಗಿ ಟೀಕಿಸಿದ್ದಾರೆ.
ದೇಶಧಲ್ಲೇ ಮುತ್ಸದ್ದಿ ರಾಜಕಾರಣಿಗಳಲ್ಲಿ ಡಾ ಖರ್ಗೆ ಮೊದಲಿಗರಾಗಿ ನಿಲ್ಲುತ್ತಾರೆ. ವಿಷಯ ಹೀಗಿರುವಾಗ ಏನೂ ಗೊತ್ತಿಲ್ಲದಂತೆ ಮೈಬಣ್ಣ ಹೋಲಿಕೆ ಮಾಡುತ್ತ ಟೀಕಿಸಿರುವ ಜ್ಞಾನೇಂದ್ರ ಅe್ಞÁನಿಯಾಗಿದ್ದಾರೆ ಎಂಬುದಕ್ಕೆ ಅವರ ಮಾತೇ ಸಾಕ್ಷಿಯಾಗಿದೆ. ತಕ್ಷಣ ಕ್ಷಮೆ ಕೋರಬೇಕು. ಇಲ್ಲದೆ ಹೋದಲ್ಲಿ ರಾಜ್ಯ್ದಂಯತ ಹೋರಾಟ ಮಾಡಬೇಕಾಗುತ್ತದೆ ಎಂದೂ ಅಲ್ಲಂಪ್ರಭು ಪಾಟೀಲ್ ಎಚ್ಚರಿಕೆ ನೀಡಿದ್ದರೆ.
ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಮೈಬಣ್ಣದ ಬಗ್ಗೆಯೂ e್ಞÁನೇಂದ್ರ ಅಡಿರುವ ಮಾತುಗಳು ಸರಿಯಲ್ಲ. ಟೀಕೆ-ಟಿಪ್ಪಣಿ ಇರಬೇಕು, ಆದರೆ ವೈಯಕ್ತಿಕವಾಗಿರಬಾರದು. ಅವಹೇಳನಕಾರಿ ಧಾಟಿಯಲ್ಲಿ ಯಾರೂ ಮಾತನಾಡಬಾರದು ಎಂಬ ಶಿಸ್ತು ಸಹ ಅರಗ ರೆತಿದ್ದಾರೆ. ಇಂತಹವರಿಗೆ ಜನರೇ ಪಾಠ ಕಲಿಸುತ್ತಾರೆಂದು ಪಾಈಲ್ ಹೇಳಿದ್ದಾರೆ.