ಕಲಬುರಗಿ: ಜೇವರ್ಗಿ ಶಾಸಕ ಹಾಗೂ ನೂತನ ಕೆಕೆಆರ್ಡಿಬಿ ಅಧ್ಯಕ್ಷರಾಗಿ ನಗರಕ್ಕೆ ಆಗಮಿಸಿದ ಡಾ.ಅಜಯ ಸಿಂಗ್ ಅವರನ್ನು ಕಾಂಗ್ರೆಸ್ ಯುವ ನಾಯಕರಾದ ಸಮರ್ಥ ಪಾಟಕ್ ,ಸಿದ್ದಾಂತ್ ಪಾಟಕ್ ಹಾಗೂ ಅಫಾನ್ ಅವರ ನೇತೃತ್ವದಲ್ಲಿ ಕ್ರೇನ್ ಮೂಲಕ ಬೃಹತ್ ಹೂ ಮಾಲೆ ಹಾಕಿ ಸ್ವಾಗತಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಕಾರ್ತಿಕ ನಾಟೀಕಾರ, ಸರೂಪ್ ಪಾಟೀಲ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಇದ್ದರು.