ಸ್ವಾತಂತ್ರ್ಯ ಹೋರಾಟಗಾರರೇ ನಮಗೆಲ್ಲರಿಗೂ ರಿಯಲ್ ಹಿರೋಗಳು

0
152

ಶಹಾಬಾದ: ನಗರದ ಭೀಮಶಪ್ಪ ನಗರದಲ್ಲಿ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಹಾಗೂ ಬ್ರಹ್ಮಾರಾಂಬಿಕ ದೇವಾಲಯ ಹೊನ್ನಾಳ ಶಾಖಾ ಮಠ ಹಾಗೂ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೋಮವಾರ ವಸುಧಾ ವಂದನ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಮತ್ತು ವಿವಿಧ ಕಾರ್ಯಕ್ರಮ ಜರುಗಿತು.

ಜಿಲ್ಲಾ ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಪಾಟೀಲ್ ರಾಯಕೂಡ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹೋರಾಟಗಾರರೇ ನಮಗೆಲ್ಲರಿಗೂ ರಿಯಲ್ ಹಿರೋಗಳು.ಆದರೆ ಇಂದು ಸಿನಿಮಾ ನಟರನ್ನು ಹಾಗೂ ಆಟಗಾರರನ್ನು ಹಿರೋಗಳಾಗಿ ಮಾಡಿಕೊಳ್ಳುತ್ತಿರುವುದು ದುರ್ದೈವ.ತಮ್ಮ ಮೆನೆ, ಕಟುಂಬವನ್ನು ಲೆಕ್ಕಿಸದೇ ಜನರ ಏಳ್ಗೆಗಾಗಿ ತ್ಯಾಗ, ಬಲಿದಾನವನ್ನು ನೀಡಿ, ಸ್ವತಂತ್ರ ಒದಗಿಸಿಕೊಟ್ಟ ಮಹಾನ್ ವ್ಯಕ್ತಿಗಳೇ ನಮಗೆ ಆದರ್ಶವಾಗಬೇಕೆಂದು ಹೇಳಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರ ಸಂಘದ ಅಧ್ಯಕ್ಷ ತಿಪ್ಪಣ್ಣ ಮಾಸ್ತರ ಬೋರಗಾಂವಕರ ಹಾಗೂ ನಿವೃತ್ತ ಸೈನಿಕ ಅಶೋಕ ಗುತ್ತೆದಾರ (ಹುಬ್ಬಳ್ಳಿ) ಅವರನ್ನು ಸನ್ಮಾನಿಸಲಾಯಿತು.

ಮಂಡಲ ಯುವಮೋರ್ಚಾ ಅಧ್ಯಕ್ಷ ದೀನೇಶ ಗೌಳಿ, ಮಂಡಲ ಉಪಾಧ್ಯಕ್ಷ ಮಹದೇವ ಗೊಬ್ಬೂರಕರ, ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ, ಪ್ರಮುಖರಾದ ಕನಕಪ್ಪ ದಂಡಗುಲಕರ, ಚಂದ್ರಕಾಂತ ಗೋಬ್ಬೂರಕರ, ಬಸವರಾಜ ಬಿರಾದಾರ, ತಿಮ್ಮಣ್ಣ ಕುರ್ಡೆಕರ, ದತ್ತಾ ಫಂಡ್, ಸಂಗಮೇಶ ಪಟ್ಟೆದಾರ, ರಾಕೇಶ ಮಿಶ್ರ, ಅವಿನಾಶ ಸಾಳುಂಕೆ, ಸಾಬಣ್ಣ ಜಾಪುರ, ಉಮೇಶ ನಿಂಬಾಳಕರ, ಶ್ರೀನಿವಾಸ ನೇದಲಗಿ, ಭರಮಣ್ಣ ದಂಡಗುಲಕರ, ಸುರೇಂದ್ರ ನಂದಗೌಳಿ ಹಾಗೂ ಯುವ ಮೋರ್ಚಾದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here