ಜಾಗತಿಕ ಲಿಂಗಾಯಕ ಮಹಾಸಭಾ ಶ್ರಾವಣದ ಅಂಗವಾಗಿ ಅನುಭಾವ ಕಾರ್ಯಕ್ರಮ

0
8

ಸುರಪುರ: ಜಾಗತಿಕ ಲಿಂಗಾಯತ ಮಹಾಸಭಾ ಸುರಪುರ ತಾಲೂಕು ಘಟಕ ದಿಂದ ಶ್ರಾವಣ ಮಾಸದ ಅಂಗವಾಗಿ ಪ್ರತಿ ಸೋಮವಾರ ಅನುಭಾವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಶಿವರುದ್ರ ಉಳ್ಳಿ ತಿಳಿಸಿದರು.

ನಗರದ ಸತ್ಯಂಪೇಟೆಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ನಮ್ಮ ಸತ್ಯಂಪೇಟೆ ಗ್ರಾಮದಲ್ಲಿನ ಬಸವಮಾರ್ಗ ಪ್ರತಿಷ್ಠಾನದ ಅರಿವಿನ ಮನೆ ಆವರಣದಲ್ಲಿ (ಇಂದು) ಸೋಮವಾರ ಸಂಜೆ 6 ಗಂಟೆಗೆ ಮೊದಲನೇ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು,ಶರಣೆ ತಾಯಂದಿರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Contact Your\'s Advertisement; 9902492681

ಕೊಡೇಕಲ್ ದುರದುಂಡೇಶ್ವರ ಮಠದ ಶಿವಕುಮಾರ ಸ್ವಾಮೀಜಿಯವರು ಅನುಭಾವ ನೀಡಲಿದ್ದು,ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಅವರಿಗೆ ಶರಣ ಸನ್ಮಾನ ನೆರವೇರಿಸಲಾಗುವುದು.ನ್ಯಾಯವಾದಿ ಜಿ.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.ಸತ್ಯಂಪೇಟೆ ಗ್ರಾಮದ ಸಮಸ್ತ ಬಸವಾಭಿಮಾನಿಗಳು,ಹಿರಿಯರು ಹಾಗೂ ಎಲ್ಲ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಎಲ್ಲರು ಭಾಗವಹಿಸುವಂತೆ ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಮುಖಂಡರಾದ ಮಂಜುನಾಥ ಹಿರೇಮಠ,ನಾಗಭೂಷಣ ಯಾಳಗಿ,ನಿಂಗಣ್ಣ ಕೆಂಭಾವಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here