25 ರಂದು ಸಿಬಿಎಸ್‍ಇ ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರ ವಿಷಯದ ಉಚಿತ ಮಾರ್ಗದರ್ಶನ

0
75

ಕಲಬುರಗಿ: ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ಕಲಬುರಗಿಯಲ್ಲಿ ವೇದಿಕ್ ಸಂಸ್ಥೆ ಆರಂಭವಾಗಿದೆ.

ಇದೇ ಆ.25 ರಂದು ಶುಕ್ರವಾರ ಸಂಜೆ 6. ಗಂಟೆಗೆ ಸಿಬಿಎಸ್‍ಇ ವಿದ್ಯಾರ್ಥಿಗಳಿಗೆ ಕೇಂದ್ರ ಪಠ್ಯಕ್ರಮದ ಸಮಾಜಶಾಸ್ತ್ರ ವಿಷಯದಲ್ಲಿ ಬೆಂಗಳೂರಿನ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಹಾಗೂ ಹಲವಾರು ಸಮಿತಿಗಳ ಸದಸ್ಯರಾಗಿರುವ ಸಂತೋಷ್ ಗೌಡ ಮಾರ್ಗದರ್ಶನ ನೀಡುವರು.

Contact Your\'s Advertisement; 9902492681

ಪ್ರಶ್ನೆ ಪತ್ರಿಕೆ ರಚನೆ, ಉತ್ತರ ಬರೆಯುವ ಶೈಲಿ ಹಾಗೂ ಹೆಚ್ಚು ಅಂಕ ಗಳಿಸುವ ಕಲೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವರು. ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಈ ವಿಶೇಷ ಮಾರ್ಗದರ್ಶನದಿಂದ ಪರೀಕ್ಷೆ ಬರೆಯಲು ಬೇಕಾಗುವ ಅವಶ್ಯಕತೆಗಳ ಬಗ್ಗೆ ಮಾಹಿತಿ ದೊರೆಯಲಿದ್ದು ಇದರ ಲಾಭ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಆಸಕ್ತರು ಸಂಯೋಜಕರಾದ ಮನೋಜ್‍ಕುಮಾರ್ ಅವರನ್ನು (ಮೊ.7829089993) ಸಂಪರ್ಕಿಸಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here