ವಾಹನ ಸವಾರ ಸಾವು

0
19

ಕಲಬುರಗಿ: ದ್ವಿಚಕ್ರ ಸವಾರ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ತಾಪುರ ಪಟ್ಟಣದ ಹೊರವಲಯದ ಕರದಾಳ ರಸ್ತೆಯ ಸೇತುವೆ ಬಳಿ ಸೋಮವಾರ ರಾತ್ರಿ ನಡೆದಿದೆ.

ಚಿತ್ತಾಪುರ ಪಟ್ಟಣದ ಯುವಕ ಸೋಹೆಲ್ ಪರವೇಜ್ (30) ಮೃತ ದುರ್ದೈವಿ. ಸೋಮವಾರ ರಾತ್ರಿ ಬುಲೆಟ್ ದ್ವೀಚಕ್ರ ವಾಹನದ ಮೇಲೆ ಕರದಾಳ ಗ್ರಾಮಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ಹೇಳಿ ಹೋಗಿದ್ದಾನೆ. ಆದರೆ ರಾತ್ರಿ ವಾಪಸ್ಸು ಬರದೇಯಿರುವುದರಿಂದ ಮನೆಯವರು ಗಾಬರಿಗೊಂಡಿದ್ದಾರೆ.

Contact Your\'s Advertisement; 9902492681

ಮಂಗಳವಾರ ಬೆಳಗ್ಗೆ ಸೇತುವೆ ಬಳಿ ಆತನ ಶವ ಹಾಗೂ ಬೈಕ್ ನೋಡಿ ಕೆಲವರು ಪೋಲಿಸರಿಗೆ ತಿಳಿಸಿದ್ದಾರೆ. ಸಿಪಿಐ ಪ್ರಕಾಶ ಯಾತನೂರ, ಪಿಎಸ್‍ಐ ಶ್ರೀಶೈಲ್ ಅಂಬಾಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿತ್ತಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here