ಆಳಂದ; ಪಟ್ಟಣದ ಶರಣ ಏಕಾಂತರಾಮಯ್ಯ ಅನುಭವ ಮಂಟಪದಲ್ಲಿ ರವಿವಾರ ಬೆಳಿಗ್ಗೆ ಶ್ರಾವಣ ಮಾಸದ ಅಂಗವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಚನಗಾಯನ ಸ್ಪರ್ಧೆ ನಡೆಯಿತು.
ವಿವಿಧ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಂಜಯ ಪಾಟೀಲ್ ,ಉಪನ್ಯಾಸಕ ರಮೇಶ್ ಮಾಡ್ಯಾಳೆ,ಕಾಶಿನಾಥ ಬಿರಾದಾರ,ಮಲ್ಲಿನಾಥ ವಚ್ಚೆ ಸೇರಿದಂತೆ ಮತ್ತಿತರರು ಇದ್ದರು.