ಆರಾಧನಾ ಮಹೋತ್ಸವದ ಅ. 31ಕ್ಕೆ

0
15

ಆಳಂದ; ತ್ರಿಮೂರ್ತಿ ತರುಣ ಮಂಡಲದ ವತಿಯಿಂದ ಪಟ್ಟಣದ ನಗರೇಶ್ವರ ರಾಮ ಮಂದಿರದಲ್ಲಿ ಅಗಸ್ಟ್ 31 ಗುರುವಾರ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು
ತ್ರೀಮೂರ್ತಿ ತರುಣ ಮಂಡಳಿ ಅಧ್ಯಕ್ಷ ಕಿಶೋರ ಕಲ್ಯಾಣರಾವ (ಸಂಗೋಳಗಿಕರ ) ಹಾಗೂ ಖಜಾಂಚಿ ಸುರೇಶ್ ಕುಲಕರ್ಣಿ ತಿಳಿಸಿದ್ದಾರೆ.

ಪಟ್ಟಣದ ಬ್ರಾಹ್ಮಣ ಬಡಾವಣೆಯ ರಾಮ ಮಂದಿರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೆಳಗ್ಗೆ 7 ಕ್ಕೆ ರುದ್ರಾಭಿಷೇಕ ಹಾಗೂ ಶ್ರೀರಾಮ ದೇವರ ಅಭಿಷೇಕ, 9 ಕ್ಕೆ ಅಭಿಷೇಕ ಮಹಾ ಮಂಗಳಾರತಿ,11ಕ್ಕೆ ಶ್ರೀಗಳ ಭಾವಚಿತ್ರದ ಮೆರವಣಿಗೆ ಮ.1ಕ್ಕೆ ಮಹಾಪ್ರಸಾದ, ಸಂಜೆ 7ಕ್ಕೆ ಪಲ್ಲಕ್ಕಿ ಸೇವೆ ಹಾಗೂ ತೊಟ್ಟಿಲು ಸೇವೆ ಇರಲಿದೆ.ಭಕ್ತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಆನಂದ ಗುಂಡೇರಾವ ಕುಲಕರ್ಣಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here