ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಹಬಾಳ್ವೆಗೆ ಪ್ರೇರಣೆ

0
7

ಕಲಬುರಗಿ: ಮನೆಗೆ ಸೀಮಿತವಾಗಿದ್ದ ಅಷ್ಟಮಿಯನ್ನು ಸಾರ್ವತ್ರಿಕವಾಗಿ ಆಚರಿಸುವ ಮೂಲಕ ಸಹಬಾಳ್ವೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಸಂಪನ್ಮೂಲ ವ್ಯಕ್ತಿ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.

ಅವರು ಜೇವರ್ಗಿ ನಗರದ ಮಹಾಲಕ್ಷ್ಮೀ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಬಾಲ್ಯದಲ್ಲಿ ಮಕ್ಕಳಿಗೆ ಓದು ಬರಹ ಕಲಿಸುವುದರ ಜೊತೆಗೆ ಸಂಸ್ಕಾರದ ಶಿಕ್ಷಣವನ್ನು ನೀಡುವುದು ಅತ್ಯಗತ್ಯ. ಮಹಾಭಾರತದ ಯುದ್ದದಲ್ಲಿ ಅರ್ಜುನನ ಸಾರಥ್ಯ ವಹಿಸಿದ ಶ್ರೀಕೃಷ್ಣನು ಅಧರ್ಮವನ್ನು ತೊಲಗಿಸಿ ಧರ್ಮ ರಕ್ಷಣೆಗಾಗಿ ಹೋರಾಡಲು ಅರ್ಜುನನಿಗೆ ಉಪದೇಶಿಸುವ ಮೂಲಕ ಅಧರ್ಮದ ವಿರುದ್ಧ ಎಲ್ಲರೂ ಒಟ್ಟಾಗಿ ಹೊರಾಡಬೇಕು ಎಂದು ಜಗತ್ತಿಗೆ ಸಾರಿದ್ದಾನೆ.

Contact Your\'s Advertisement; 9902492681

ಆ ತತ್ವವನ್ನು ಜಿವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀಕೃಷ್ಣ ಜೀವನೂತ್ಸಾಹದ ಸಂಕೆತ. ಆತನ ಪ್ರಭುದ್ದತೆ, ಮುತ್ಸದಿತನ ಎಲ್ಲಾ ಕಾಲಗಟ್ಟಕ್ಕು ಮಾದರಿಯಾಗಿ ನಿಲ್ಲುತ್ತದೆ. ಭಗವಾನ ಶ್ರೀ ಕೃಷ್ಣನ ವ್ಯಕ್ತಿತ್ವ ಅದ್ಭುತವಾದದ್ದು. ಆತನ ಜೀವನದ ಪ್ರತಿ ಘಟನೆಯೂ ಅನುಸರಣೀಯವಾದದು. ಅದಕ್ಕಾಗಿಯೇ ಮಾನವನು ಸಾವಿರಾರು ವರ್ಷಗಳಿಂದ ಕೃಷ್ಣನ ನಡೆ-ನುಡಿಗಳನ್ನು ಅನುಸರಿಸುತ್ತಾ ಬಂದಿದ್ದಾನೆ. ಆತನ ಬಾಲ್ಯ ಲೀಲೆಗಳಿಂದ ಇಂದಿಗೂ ಸಹ ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಸಮಾಧಾನವನ್ನು ಸೂಚಿಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉತ್ತಮ ಶಿಕ್ಷಕಿಯರಾದ ಅಶ್ವಿನಿ, ಶಿವಾನಿ, ಭಾಗ್ಯಶ್ರೀ ವಾಯ್, ತಾಯಮ್ಮ, ಭಾಗ್ಯಶ್ರೀ ಪಾಟೀಲ್, ಶರಣಮ್ಮ, ಮೆಹಜಬಿನ್, ರೇಷ್ಮಾ, ರೇಣುಕಾ, ಶಿಕ್ಷಕರಾದ ಶರಣಗೌಡ, ಶಿವರಾಜ್, ಮಹಾಂತೇಶ ಸೇರಿ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here