ಅಂಗನವಾಡಿ ಕಾರ್ಯಕರ್ತೆಗೆ ಸೇವೆಗೆ ತೆಗೆದುಕೊಳ್ಳದ ಸಿಡಿಪಿಓ ವಿರುದ್ಧ ಪ್ರತಿಭಟನೆ

0
22

ಸುರಪುರ: ಬೈರಿಮರಡಿ ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯನ್ನು ಅಕ್ರಮವಾಗಿ ಗೌರವಧನ ಸೇವೆಯಿಂದ ಬಿಡುಗಡೆಗೊಳಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಯೋಜನಾಧಿಕಾರಿ ಅನಿಲ್ ಕಾಂಬ್ಳೆ ವಿರುದ್ಧ ಇದೇ 12ನೇ ತಾರಿಖು ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಬೈರಿಮರಡಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಒಬ್ಬ ವಿಧವೆ ಮಹಿಳೆಯಾಗಿದ್ದು,ಆ ಮಹಿಳೆಯ ವಿರುದ್ಧ ದುರುದ್ದೇಶ ದಿಂದ ಕೆಲವರು ಪೊಲೀಸ್ ದೂರು ನೀಡಿದ್ದಾರೆ.ಆದರೆ ಆ ಮಹಿಳೆಯ ಮೇಲೆ ಯಾವುದೇ ಅಪರಾಧ ಸಾಬೀತಾಗಿಲ್ಲ,ಆದರೂ ಸಿಡಿಪಿಓ ನಿಯಮ ಮೀರಿ ಅವರನ್ನು ಗೌರವಧನ ಸೇವೆಯಿಂದ ಬಿಡುಗಡೆಗೊಳಿಸಿ,ಒಂದುವರೆ ತಿಂಗಳಿನಿಂದ ಕೆಲಸಕ್ಕೆ ಹಾಜರುಪಡಿಸಿಕೊಳ್ಳದೆ ಸತಾಯಿಸುತ್ತಿದ್ದಾರೆ.

Contact Your\'s Advertisement; 9902492681

ಸಿಡಿಪಿಓ ಅವರ ಈ ನಿಯಮಬಾಹಿರ ನಡೆಯನ್ನು ಖಂಡಿಸಿ ಇದೇ ಮಂಗಳವಾರ 12ನೇ ತಾರಿಖು ಸಿಡಿಪಿಓ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಲಿದೆ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here