ಒತ್ತಡ ನಿವಾರಣೆಗೆ, ಆತ್ಮಹತ್ಯೆ ತಡೆಗಟ್ಟಲು ಧ್ಯಾನ ಉತ್ತಮ ಮಾರ್ಗ

0
20

ಕಲಬುರಗಿ: ನಗರದ ಹೈ.ಕ.ಶಿ.ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಮನೋವಿಜ್ಞಾನ ವಿಭಾಗದ ವತಿಯಿಂದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಧಿ ವಿಜ್ಞಾನ ವಿಭಾಗದ ಅಧಿಕಾರಿಗಳಾದ ಡಾ.ದಿಲೀಪಕುಮಾರ ಎಸ್.ನವಲೆ ಅವರು ಮಾತನಾಡುತ್ತಾ ಮನುಷ್ಯ ಜೀವನದುದ್ದಕ್ಕೂ ಅನೇಕ ಒತ್ತಡಗಳಿಗೆ ಒಳಗಾಗಿ ಆತ್ಮಹತ್ಯೆಯ ಮಾರ್ಗ ಹಿಡಿಯುತ್ತಾರೆ ಅಂತಹವರು ಧ್ಯಾನ ಮಾಡುವುದರ ಮೂಲಕವಾಗಿ ಒತ್ತಡದಿಂದ ಹೊರಬಂದು ನೆಮ್ಮದಿಯ ಬದುಕು ಬಾಳಬಹುದು ಎಂದು ಕರೆನೀಡಿದರು.

ಮುಂದುವರೆದು ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿಸುವುದರ ಮೂಲಕ ಪ್ರಾಯೋಗಿಕವಾಗಿ ಅದರ ಲಾಭವನ್ನು ವಿವರಿಸಿದರು .ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಮುಖ್ಯ ಅತಿಥಿಗಳಾದ ಖ್ವಾಜಾ ಬಂದೇನವಾಜ ವಿಶ್ವವಿದ್ಯಾಲಯ ಕಲಬರಗಿಯ .ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮನಿಷಾ ಪಾಟೀಲ್ ಮಾತನಾಡುತ್ತಾ ಧನಾತ್ಮಕ ಮನೋಭಾವದಿಂದ ಆತ್ಮಹತ್ಯೆ ತಡೆಗಟ್ಟಬಹುದು ಅದಕ್ಕಾಗಿ ಧನಾತ್ಮಕ ಮನೋವಿಜ್ಞಾನ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಇನ್ನೋರ್ವ ಮಖ್ಯ ಅತಿಥಿಗಳಾದ ಹಿರಿಯ ವೈಜ್ಞಾನಿಕ ಅಧಿಕಾರಿ ವಿಧಿ ವಿಜ್ಞಾನ ವಿಭಾಗ ಬೆಳಗಾವಿಯ ಡಾ.ಮಲ್ಲಿಕಾರ್ಜುನ ಕೃಷ್ಣಾ ರವರು ಈ ಮಹಾವಿದ್ಯಾಲಯದಲ್ಲಿ ತಾವು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನೆನಪುಗಳನ್ನು ಮೆಲಕು ಹಾಕುತ್ತಾ ಪ್ರಸ್ತುತ ಮನೋವಿಜ್ಞಾನ ಕಲಿಯುವುದರಿಂದ ಬಹಳಷ್ಟು ಉದ್ಯೋಗ ಅವಕಾಶಗಳು ದೊರೆಯುತ್ತವೆ ವಿವಿಧ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ ಜೊತೆಗೆ ಕೌಟುಂಬಿಕ ಬದುಕಿನಲ್ಲಿಯು ಸಮಸ್ಯೆಗಳ ನಿವಾರಣೆಗೆ ಸಹಾಯಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ವಹಿಸಿಕೊಂಡು ಮನೋವಿಜ್ಞಾನ ವಿಭಾಗದವರು ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡು ವಿಧ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವಲ್ಲಿ ಶ್ರಮಿಸುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ .ಛಾಯಾ ಪಾಟೀಲ ,ಉಪನ್ಯಾಸಕಿ ಸುರಕ್ಚಾ ಠಾಕೂರ್ ಉಸ್ತುವಾರಿ ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯರಾದ ಡಾ.ವೀಣಾ ಹೆಚ್ ,ರಾ.ಸೇ.ಯೋ ಅಧಿಕಾರಿಗಳಾದ ಡಾ.ಮಹೇಶ ಗಂವ್ಹಾರ, ಡಾ.ರೇಣುಕಾ ಹಾಗರಗುಂಡಗಿ ,ಪ್ರಾಧ್ಯಾಪಕರಾದ ಡಾ.ಚಂದ್ರಕಲಾ ಪಾಟೀಲ,ಡಾ.ಶರಣಮ್ಮ ಕುಪ್ಪಿ ಶ್ರೀಮತಿ ಶಿವಲೀಲಾ ಧೊತ್ರೆ,ಡಾ.ಜ್ಯೋತಿಪ್ರಕಾಶ ಡಾ. ರಾಜೇಶ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು .ಕುಮಾರಿ ಹೆಜಲ್ ಥಕ್ಕರ್ ನಿರುಪಿಸಿದರು,ಕುಮಾರಿ ಐಶಾ ತಹೆಸಿನ್ ಪ್ರಾರ್ಥಿಸಿದರು,ಕುಮಾರಿ ನಾಝನಿನ್ ಬೇಗಂ ಸ್ವಾಗತಿಸಿದರು,ಕುಮಾರಿ ಅಶ್ವಿನಿ. ಕೆ. ಅತಿಥಿಗಳನ್ನು ಪರಿಚಯಿಸಿದರು, ಕುಮಾರಿ.ಐಶಾ ಸಮರಿನ್ ವಂದಿಸಿದರು.

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ದಿನಾಂಕ 12-09-2023 ರಂದು ಮಹಾವಿದ್ಯಾಲಯದ ಮನೋವಿಜ್ಞಾನ ವಿಭಾಗದ ವಿಧ್ಯಾರ್ಥಿನಿಯರಾದ ಕುಮಾರಿ ಹೆಜಲ್,ಅಶ್ವಿನಿ, ಐಶಾ ,ಕೋಮಲ್,ಅಕ್ಸಾ,ಸುಮಿತ್ರಾ,ಸಭಾ ಮೊದಲಾದವರು ಸೇರಿಕೊಂಡು ಮಹತ್ವದ ಸಂದೇಶವನ್ನು ಸಾರುವ ಕಿರು ನಾಟಕವನ್ನು ಪ್ರಸ್ತುತಪಡಿಸಿದರು .
ಹಾಗೂ ಇದೇ ಸಂಧರ್ಭದಲ್ಲಿ ವಿದ್ಯಾರ್ಥಿ ನಿಯರಿಗೆ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಇವರು ಪ್ರತಿಜ್ನಾ ವಿಧಿಯನ್ನು ಬೋಧಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here