ಅಫಜಲಪುರ; ಪಟ್ಟಣದ ಸರಕಾರಿ ಸಾರ್ವಜನಿಕ ತಾಲೂಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಫೌಜೀಯಾ ತರುನಮ್ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಜನರಲ್ ವಾರ್ಡ , ಹೆರಿಗೆ ವಾರ್ಡ, ಒಪಿಡಿ ವಿಭಾಗ, ಶಸ್ತ್ರ ಚಿಕಿತ್ಸೆ , ತುರ್ತು ಚಿಕಿತ್ಸಾ ಘಟಕ, ಚುಚು ಮದ್ದು ಕೋಣೆ, ಡಯಾಲೀಸಸ್ ಘಟಕ ವೀಕ್ಷಣೆ ಮಾಡಿ ಪರಿಶೀಲಿಸಿದರು.
ನಂತರ ಮಾತನಾಡಿ ರೋಗಿಗಳ ಸೇವೆ ಮಾಡುವುದೇ ವೈದ್ಯರ ಧರ್ಮ, ಆ ಪಾಲನೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಇದಕ್ಕಿಂತ ಉತ್ತಮ ಕಾರ್ಯ ಮತ್ತೊಂದಿಲ್ಲ. ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಹೆಚ್ಚು ಬಡ ಕುಟುಂಬದವಾರಾಗಿದ್ದು, ಅವರ ನೆರವಿಗೆ ವೈದ್ಯರು ಸಹಕಾರಿಯಾಗಬೇಕು.
ಸಾರ್ವಜನಿಕರ ಅರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗಳನ್ನು ಸ್ವಚ್ಛವಾಗಿ ಕಾಪಾಡಬೇಕು ಮತ್ತು ಯಾವ ರೀತಿಯಲ್ಲಿಯು ಜನತೆಗೆ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ಸರಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ ಆಸ್ಪತ್ರೆಗೆ ಬಂದಂತ ರೋಗಿಗಳಿಗೆ ತಾಳ್ಮೆಯಿಂದ ಪರೀಕ್ಷಿಸಿ ಉತ್ತಮ ಚಿಕಿತ್ಸೆ ನೀಡಿ ಉತ್ತಮ ಕಾರ್ಯನಿರ್ವಹಿಸಿ. – ಫೌಜೀಯಾ ತರುನಮ್ ಜಿಲ್ಲಾಧಿಕಾರಿಗಳು ಕಲ್ಬುರ್ಗಿ
ಆಸ್ಪತ್ರೆ ವೈದ್ಯಧಿಕಾರಿ ವಿನೋದ ರಾಠೋಡ ಹಾಗೂ ಮಾಧ್ಯಮದವರವರೊಂದಿಗೆ ಆಸ್ಪತ್ರೆ ಸಮಸ್ಯೆ ಹಾಗೂ ಪರಿಹಾರ ಕುರಿತು ಕೆಲ ಸಮಯ ಚರ್ಚಿಸಿದರು, ನಂತರ ಸಾರ್ವಜನಿಕರಿಂದ ಹಾಗೂ ರೈತ ಸಂಘದ ಪದಾಧಿಕಾರಿಗಳಿಂದ ವಿವಿಧ ಬೇಡಿಕೆಗಳ ಕುರಿತು ಮನವಿ ಪತ್ರ ಸ್ವೀಕರಿಸಿದರು.
ನಂತರ ಬಸವೇಶ್ವರ ವೃತ್ತದಿಂದ ತಹಸೀಲ ಕಚೇರಿಯವರಿಗೆ ನಡೆತ್ತಿರುವ ರಸ್ತೆ ಕಾಮಗಾರಿ ಪರಿಶೀಲನೆ ನಡಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ, ಪುರಸಭೆ ಮುಖ್ಯಧಿಕಾರಿ ವಿಜಯ ಮಹಾಂತೇಶ ಹೂಗಾರ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.