ಸ್ವಚ್ಛ ಗ್ರಾಮ ಮಾಡಲು ಪಂಚಾಯತಿಯ ಸಹಕಾರ ಅಗತ್ಯ: ಭನ್ಹಾರಸಿಂಗ್ ಮೀನಾ

0
145

ಕಲಬುರಗಿ: ಪ್ರತಿ ಗ್ರಾಮ ಪಂಚಾಯತಗಳಲ್ಲಿ ವೈಜ್ಞಾನಿಕ ವಿಧಾನಗಳಲ್ಲಿ ತ್ಕಾಜ್ಯ ಸಂಗ್ರಹಣೆ ಮಾಡಿ ಸಂಸ್ಕರ್ಣೆ ಮಾಡಲು ಗ್ರಾಮ ಪಂಚಾಯತಿಯವರು ಮುಂದೆ ಬರಬೇಕು. ಪ್ರತಿ ಗ್ರಾಮ ಪಂಚಾಯತಗಳು ಸ್ವಚ್ಛ ಗ್ರಾಮ ಮಾಡಲು ಗ್ರಾಮ ಪಂಚಾಯತಿಯ ಆಡಳಿತ ಮಂಡಳಿ ಸಹಕಾರ ಪ್ರಮುಖವಾದದ್ದು ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಭನ್ಹಾರಸಿಂಗ್ ಮೀನಾ ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಆಯೋಜಿಸಿರುವ ಜಿಲ್ಲೆಯಲ್ಲಿ ಸ್ವಚ್ಛ ಸಂಕೀರ್ಣ ಘಟಕ ನಿರ್ಮಾಣವಾಗಿರುವ ಆಯ್ದ ಗ್ರಾಮ ಪಂಚಾಯತಗಳಲ್ಲಿನ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ತ್ಯಾಜ್ಯ ನಿರ್ವಹಣೆ ಮಾಡಲು ಒಡ೦ಬಡಿಕೆ ಮಾಡಿಕೊಂಡಿರುವ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಅಧ್ಯಕ್ಷರಿಗೆ. ಆಯೋಜಿಸಿರುವ ಕಾರ್ಯಗಾರ ಉದ್ಭಾಟಿಸಿ ಮಾತನಾಡಿದರು.

Contact Your\'s Advertisement; 9902492681

ಪ್ರತಿ ಗ್ರಾಮ ಪಂಚಾಯತಗಳಿಗೆ ಸ್ವಚ್ಛವಾಹಿನಿ ನೀಡಲಾಗಿದ್ದು, ಸ್ಪಚ್ಚತಾ ಸಿಬ್ಬಂದಿಯನ್ನು ಹೊಂದಿದ್ದು, ಪ್ರತಿಧಿನ ಪ್ರತಿ ಮನೆ- ಅ೦ಗಡಿ, ಹೋಟೆಲ್ ಮುಂತಾದ ತ್ಯಾಜು ಉತ್ಪಾದನೆಯ ಸ್ಥಳಗಳಿಂದ ಪ್ರತಿ ದಿನ ತ್ಯಾಜ್ಯ ಸ೦ಗ್ರಹಿಸುವಂತೆ ವೇಳಾ ಪಟ್ಟಿ ಹಾಕಿಕೊ೦ಡು ಸ್ವಚ್ಛವಾಹಿನಿ ಮೂಲಕ ತ್ಯಾಜ್ಯ ಸಂಗ್ರಹಿಸಿ- ಸಂಸ್ಕರ್ಣ ಮಾಡಲು ಎಲ್ಲಾ ಗ್ರಾಮ ಪಂಚಾಯತಗಳಲ್ಲಿನ ಅಧ್ಯಕ್ಷರು, ಸದಸ್ಯರು, ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಸ್ವಯಂವಾಗಿ ಮುಂದೆ ಬ೦ದು ಸಾರ್ವಜನಿಕರಿಗೆ ಜಾಗರತಿ ಮೂಡಿಸಬೇಕಾಗಿದೆ ಎಂದರು.

ಗ್ರಾಮೀಣಾ ಅಭಿವೃಧ್ಧಿ ಓ ಪಂಚಾಯತ ರಾಜ್, ಗ್ರಾಮೀಣ ಕುಡಿಯುವ ನೀರು ೬ ನೈರ್ಮಲ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಸ್ಚಚ್ಛ ಭಾರತ ಮಿಷನ್ ಹಂತ-2 ರ ವಿವಿಧ ಫಘಟಕಾಂಶಗಳಾದ ವೈಯಕ್ತಿಕ ಶೌಚಾಲಯ ಬಳಕೆ, ತ್ಯಾಜ್ಯ ವಿಲೇವಾರಿ, ಬೂದು ನೀರು ನಿರ್ವಹಣೆ ಕಾಮಗಾರಿಗಳು ಈ ಗಾಗಲೇ ಪ್ರಗತಿಯಲ್ಲಿದ್ದು ಈ ಯೋಜನೆಯ ಘಟಕಾಂಶಗಳಿ0ದ ಗ್ರಾಮದಲ್ಲಿ ಸ್ವಚ್ಛತೆಯ ವಾತವರಣ ನಿರ್ಮಿಸಲು ಸಾಧ್ಯವಾಗುತ್ತಿದೆ. ಎ೦ಬುದನ್ನು ಜಿಲ್ಲೆಯ ಕೊಳ್ಳೂರ ಎಮ್ ಗ್ರಾಮ ಪಂಚಾಯತಿಯಲ್ಲಿ ಮಾಧರಿಯಾಗಿ ಮಾಡಲಾಗಿದೆ ಹಾಗೂ ಮಅತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳ ಸಂಸ್ಕರ್ಣ ಮಾಡಲು ತಾಲೂಕಿಗೆ ಒ೦ದರ0ತೆ ಎಮ್. ಆರ್.ಎಫ್ ಘಟಕಗಳ ನಿರ್ಮಾಣಕ್ಕೆ ಬೇಕಾಗಿರುವ ಜಮೀನು ಗುರುತಿಸಲಾಗಿದೆ. ಎಲ್ಲಾ ಗ್ರಾಮ ಪಂಚಾಯತಿಯ ಅಧ್ಯಕ್ಷರು ಈ ಎಲ್ಲಾ ಘಟಕಾಂಶಗಳ ನಿರ್ಮಾಣಕ್ಕೆ ಅವಶ್ಯವಾಗಿರುವ ವಿವಿಧ ಯೋಜನೆಯ ಅನುದಾನವನ್ನು ಒಗ್ಗೂಡಿಸಿ ಅನುಷ್ಠಾನಕ್ಕಾಗಿ ಸಹಕರಿಸಿ ಮಾದರಿ ಗ್ರಾಮ ಪಂಚಾಯತ ಮಾಡಲು ತಿಳಿಸಿದರು.

ಪ್ರತಿಜ್ಞಾ ವಿಧಿ ಬೋದನೆ: ಮುಖ್ಯ ಯೋಜನಾಧಿಕಾರಿಗಳು ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿಗಳು ಕಾರ್ಯಗಾರದಲ್ಲಿ ಉಪಸ್ಥಿತರಿದ್ದು, ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ವಚ್ಛತೆಯೇ ಸೇವೆಯ ಆಂದೋಲನದ ಕುರಿತು ಪ್ರತಿಜ್ಞಾ ವಿಧಿ ಭೊಧಿಸಿದರು.

ಸಾಹಸ್ ಸಂಸ್ಥೆಯ ನಿರ್ದೇಶಕರಿಂದ ತರಬೇತಿ: ಸಾಹಾಸ ಸಂಸ್ಥೆಯ ನಿರ್ದೇಶಕರಾದ ಮಹೇಶ ರವರು ಮಾತನಾಡಿ ರೈನ್ ಮ್ಯಾಟರ್ ಪೌಂಡೇಶನ ನ (82101178067 10) ಧನ ಸಹಾಯದಿಂದ ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆಗೆ ಅಧಿಕಾರಿ/ ಸಿಬ್ಬಂದಿಯವರಿಗೆ ಸಾಮರ್ಥ್ಯ ಅಭಿವೃದ್ಧಿ ಮತ್ತು ಸಾರ್ವಜನಿಕರಿಗೆ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಸ್ತುತ ಜಿಲ್ಲಯ ಆಯ್ದ 54 ಗ್ರಾಮ ಪಂಚಾಯತಿಯ ಆಡಳಿತ ಮಂಡಳಿ ಸದಸ್ಯರಿಗೆ ಮತ್ತು ಸ್ವಚ್ಛತಾ ಸಿಬ್ಬಂದಿಯವರಿಗೆ ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನೆಯಾಗುವ ಹಸಿ ಮತ್ತು ಒಣಕಸವನ್ನು ಪ್ರಾತ್ಯಾಕ್ಟಿಕವಾಗಿ ವಿಂಗಡಿಸಿ ತೋರಿಸುವ ಮೂಲಕ ತ್ಯಾಜ್ಯ ಎಂಗಡಣೆಯ ವಿಧನಾಗಳು ಮತ್ತು ಸೂಕ್ತ ನಿರ್ವಹಣೆಯಿಂದ ನಿರ್ಮಲ ಗ್ರಾಮ ಮಾಡಬಹುದಾಗಿದೆ ಹಾಗೂ ತ್ಯಾಜ್ಯ ವಿಲೇವಾರಿಯ ಗ್ರಾಮ ಪಂಚಾಯತಿಯ ಸೇವೆಯನ್ನು ಲಾಭದಾಯಕವಾಗಿ ಪರಿವರ್ತಿಬುವುದಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಕೊಳೆಯುವ, ಕೊಳೆಯದೆ ಇರುವ, ಪ್ಲಾಸ್ಟಿಕ್, ತ್ಯಾಜ್ಯ ಮತ್ತು ಅಪಾಯಕಾರಿಯ ತ್ಯಾಜ್ಯ ನಿರ್ವಹಣೆಯಲ್ಲಿ ಸರ್ವಾಜನಿಕರ ಸಹಕಾರ ಮುಖ್ಯವಾಗಿದೆ. ಗ್ರಾಮ ಪಂಚಾಯತಿಯವರು ಜಾಗೃತಿ ವಹಿಸಬೇಕಾಗಿರುವ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಸನ್ಮಾನ: ಕಳದ ವರ್ಷದಲ್ಲಿ ಜಿಲ್ಲೆಯಲ್ಲಿಯೇ ಉತ್ತಮವಾಗಿ ತ್ಯಾಜ್ಯ ನಿರ್ವಹಣೆ ಮಾಡಿದ ಕಲಬುರಗಿ ತಾಲೂಕಿನ ಭೀಮಳ್ಳಿ ಹಾಗೂ ಅವರಾದ(ಬಿ) ಗ್ರಾಮ ಪಂಚಾಯತಗಳ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗೂ ಸ್ವಚ್ಛತಾ ಸಿಬ್ಬಂದಿಯವರಿಗೆ ಸಹಾಸ್ ಸಂಸ್ಥೆಯಿಂದ ಸನ್ಮಾನ ಮಾಡಲಾಯಿತು.

ಕಾರ್ಯಗಾರದಲ್ಲಿ ಜಿಲ್ಲೆಯ ಕಾರ್ಯಾನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಸಹಾಸ್ ಸಂಸ್ಥೆಯ ನಿರ್ದೇಶಕರು, ವ್ಯವಸ್ಥಾಪಕರು, ಸ್ವಚ್ಛ ಭಾರತ ಮಿಷನ್ ಯೋಜನೆಯ ಸಮಾಲೋಚಕರು, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ ಅಭಿವೃದ್ಧಿ ಅಧಿಕರಿಗಳು ಒಕ್ಕೂಡದ ಅಧ್ಯಕ್ಷರು, ಸಾಹಸ್ ಸಂಸ್ಥೆಯ ಸಿಬ್ಬಂಧಿಯವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here