ಸಚಿವ ತಂಗಡಿಗೆ ಅಭಿನಂದನೆ ಸಲ್ಲಿಸಿದ ಕೊನೇಕ

0
96

ಕಲಬುರಗಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಈ ಬಾರಿ ಪ್ರಕಾಶಕರನ್ನೂ ಪರಿಗಣಿಸಿದ್ದಕ್ಕೆ ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ರೂವಾರಿ ಬಸವರಾಜ ಕೊನೇಕ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರನ್ನು ಅಭಿನಂದಿಸಿದ್ದಾರೆ.

ಸಚಿವ ತಂಗಡಗಿ ಅವರು, ಕರ್ನಾಟಕ ನಾಮಕರಣಕ್ಕೆ ಐವತ್ತು ವರ್ಷಗಳು ತುಂಬಿದ ಸುವರ್ಣ ಸಂಭ್ರಮಕ್ಕಾಗಿ ರಾಜ್ಯದ ನಾಲ್ಕೂ ವಿಭಾಗಗಳಲ್ಲಿ ಸಾಹಿತಿ, ಕಲಾವಿದರ ಸಭೆ ಆಯೋಜಿಸಿ, ಸಲಹೆಗಳನ್ನು ಸ್ವೀಕರಿಸಿದ್ದರು.

Contact Your\'s Advertisement; 9902492681

ಅದರಂತೆ ಕಲಬುರಗಿಯಲ್ಲಿ ಜರುಗಿದ ಸಭೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪುಸ್ತಕ ಪ್ರಕಾಶಕರನ್ನೂ ಪರಿಗಣಿಸಬೇಕು ಎಂದು ಬಸವರಾಜ ಕೊನೇಕ ಒತ್ತಾಯಿಸಿದ್ದರು. ಅದಕ್ಕೆ ಸ್ಪಂದಿಸಿದ ಸಚಿವರು, ಬಳ್ಳಾರಿಯ ಲೋಹಿಯಾ ಪ್ರಕಾಶನದ ಚೆನ್ನ ಬಸವಣ್ಣನವರನ್ನು ಆಯ್ಕೆ ಸಮಿತಿ ಸದಸ್ಯರನ್ನಾಗಿಸಿದ್ದು ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಸಚಿವರೊಬ್ಬರು ರಾಜ್ಯದ ಸಾಹಿತಿ ಕಲಾವಿದರ ಸಭೆ ಕರೆದು ಸಲಹೆಗಳನ್ನು ಸ್ವೀಕರಿಸಿದ್ದು ಇದೇ ಮೊದಲು. ಇದಕ್ಕೆ ಕಾರಣರಾದ ಸಚಿವ ತಂಗಡಗಿ ಯವರ ಈ ನಡೆ ಮಾದರಿಯಾಗಿದೆ ಎಂದು ಕೊನೇಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here