ಕಲಬುರಗಿ: ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ, ಕಲಬುರಗಿ ಇದರ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸಿದ್ರಮಪ್ಪ ಎಸ್. ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಮಹೇಶ ಎಮ್ ಪಾಟೀಲ್ ಆಯ್ಕೆ ಯಾಗಿರುತ್ತಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕರಾದ ಸುಭಾಷಚಂದ್ರ ಬರ್ಮಾ ಇವರು ಘೋಷಿಸಿದರು.
ಜಿಲ್ಲಾ ಒಕ್ಕೂಟದ ಒಟ್ಟು 19 ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದು, ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜರುಗಿಸಿದರು. ನಿರ್ದೇಶಕರಾಗಿ ಸಿದ್ರಮಪ್ಪ ಹರಸೂರ, ಖೇಮಲಿಂಗ್ ಶೇಟಗಾರ, ಶಿವಶರಣಪ್ಪ ಶೆಟ್ಟಿ, ಚಂದ್ರಶೇಖರ ಪರಸರೆಡ್ಡಿ, ವೈಜಿನಾಥ ತಡಕಲ್, ಬಸವರಾಜ ಸಮಾಳ, ಮಹಾಂತಪ್ಪ ಆಲೂರೆ, ವಿಜಕುಮಾರ ಜೈನ್, ಶಿವಶರಣಪ್ಪ ಕರೊಟಿ, ಸಿದ್ದರಾಮ ಮಹಾಂತಗೊಳ, ರವಿಶಂಕರ್ ಜಮದಾರಖಾನಿ, ಸಾವಿತ್ರಿ ಕುಳಗೇರಿ, ಶೈಲಜಾ ತಪ್ಪಲಿ, ಸುನಂದಾ ಗುರುಮೂರ್ತಿ, ಮಲ್ಲಿಗೆರಪ್ಪ ವಾಲಿ, ಹಣಮಂತರಾಯ ದಿಕ್ಸಂಗಿ, ಬಸವರಾಜ ಸಿ ಪಾಟೀಲ್. ಆಯ್ಕೆಯಾಗಿರುತ್ತಾರೆ ಎಂದು ರಿರ್ಟನಿಂಗ್ ಅಧಿಕಾರಿಗಳಾದ ವಿಶ್ವನಾಥ ಸಿಂಗ್ ಘೋಷಿಸಿದರು. ಚುನಾವಣಾ ಪ್ರಕ್ರೀಯಲ್ಲಿ ಇಲಾಖೆಯ ಅಧಿಕಾರಿಗಳಾದ ಹರ್ಷವರ್ಧನ ಹಿರಿಯ ಸಹಕಾರಿಗಳಾದ ಸಂಜೀವ ಮಹಾಜನ, ಅಂಬಾರಾಯ ಪಟ್ಟಣ, ಶ್ರೀನಿವಾಸ್ ಜೋಷಿ ಸಂಯುಕ್ತ ಸಹಕಾರಿಯ ಅಧಿಕಾರಿಗಳಾದ ಸೂರ್ಯಕಾಂತ ರ್ಯಾಕಲೇ, ವೀರಶಟ್ಟಿ ಕಾಮಣ್ಣಾ, ಆನಂದರಾಯ, ಶ್ರೀದೇವಿ,ಮಾಳಪ್ಪ,ಅಂಬುಲಾಲ ಉಪಸ್ಥಿತರಿದ್ದು ಶುಭ ಹಾರೈಸಿದರು.