ಶರಣ ಹೂಗಾರ ಮಾದಯ್ಯ ಜಯಂತಿ:ರೋಗಿಗಳಿಗೆ ಹಾಲು ಹಣ್ಣು ವಿತರಣೆ

0
9

ಸುರಪುರ:ತಾಲೂಕು ಹೂಗಾರ ಸಮಾಜದ ವತಿಯಿಂದ ನಗರದ ಕಾಳಿಕಾದೇವಿ ಸಭಾ ಭವನದಲ್ಲಿ ಶರಣ ಹೂಗಾರ ಮಾದಯ್ಯನವರ ಜಯಂತಿ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಶರಣ ಹೂಗಾರ ಮಾದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ವಂದಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೂಗಾರ ಸಮಾಜದ ಸ್ವಾಮೀಜಿಗಳಾದ ಶರಣ ಗುರದೇವ ಶರಣರು ಮಾತನಾಡಿ,12ನೇ ಶತಮಾನದ ಬಸವಾದಿ ಶರಣರ ಸಮಕಾಲಿನವರಾದ ನಮ್ಮ ಸಮಾಜದ ಮಾದಯ್ಯ ಶರಣರನ್ನು ಎಲ್ಲರು ಸ್ಮರಿಸಬೇಕು,ಬಸವಾದಿ ಶರಣರಂತೆ ಅನುಭವ ಮಂಟಪದಲ್ಲಿ ಕಾಯಕದಲ್ಲಿ ತೊಡಗುವ ಜೊತೆಗೆ ಶರಣರೊಂದಿಗೆ ವಚನ ಚಳವಳಿಯ ಮೂಲಕ ಸಮಾಜವನ್ನು ಶುದ್ಧಿಕರಿಸಿದ ನಮ್ಮ ಮಾದಯ್ಯ ಶರಣರು ನಮ್ಮೆಲ್ಲರಿಗು ಗುರುವಾಗಿದ್ದಾರೆ ಎಂದರು.

Contact Your\'s Advertisement; 9902492681

ಇದೇ ಸಂರ್ಭದಲ್ಲಿ ಸಮಾಜದ ತಾಲೂಕು ಅಧ್ಯಕ್ಷ ಮಲ್ಲು ಹೂಗಾರ ಮಾತನಾಡಿ,ನಮ್ಮ ಸಮುದಾಯದ ಶರಣ ಮಾದಯ್ಯನವರ ಜಯಂತಿಯನ್ನು ಪ್ರತಿವರ್ಷ ಅದ್ಧೂರಿಯಾಗಿ ಆಚರಣೆ ಮಾಡಬೇಕು,ಸರಕಾರವೂ ಈ ಜಯಂತಿ ಅದ್ಧೂರಿಯಾಗಿ ಆಚರಿಸುವಂತಾಗಬೇಕು ಮತ್ತು ನಮ್ಮ ಸಮಾಜದ ಶೈಕ್ಷಣಿಕ,ಆರ್ಥಿಕ ಮತ್ತು ರಾಜಕೀಯ ಏಳಿಗೆಗೆ ಸರಕಾರಗಳು ನಮ್ಮ ಸಮಾಜದ ಮುಖಂಡಿಗೆ ಆದ್ಯತೆ ನೀಡಬೇಕು ಎಂದರು.ಇದೇ ಸಂದರ್ಭದಲ್ಲಿ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಬನ್ನಪ್ಪ ಪೂಜಾರಿ ಮೈಲಾಪುರ,ಜಿಲ್ಲಾಧ್ಯಕ್ಷ ಭೀಮಣ್ಣ ಹೂಗಾರ ಮಾತನಾಡಿದರು.

ನಂತರ ಎಲ್ಲ ಮುಖಂಡರು ತಾಲೂಕು ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಾಲು ಹಣ್ಣು ಬ್ರೇಡ್ ವಿತರಣೆ ಮಾಡಿ ವಿಶೇಷವಾಗಿ ಆಚರಣೆ ಮಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಶಾಂತವೀರ ಚಿತ್ರಗಾರ,ಮಲ್ಲಪ್ಪ ಹೂಗಾರ ರುಕ್ಮಾಪುರ,ವೆಂಕೋಬ ಹೂಗಾರ,ಬಸವರಾಜ ಹೂಗಾರ ದೇವರಗೋನಾಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here