ಜಯಮೃತ್ಯುಂಜಯ್ ಸ್ವಾಮೀಜಿ ದಲ್ಲಾಳಿ ಟೀಕೆಗೆ ಪುರೋಹಿತರ ಖಡಕ್ ಎಚ್ಚರಿಕೆ

0
136

ಕಲಬುರಗಿ: ಪುರೋಹಿತರು ಹಾಗೂ ಅರ್ಚಕರಿಗೆ ದಲ್ಲಾಳಿ ಎಂದು ಅವಹೇಳನಗೈದಿರುವ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ್ ಸ್ವಾಮೀಜಿ ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘದ ಅಧ್ಯಕ್ಷ ವೇದಮೂರ್ತಿ ಭದ್ರಯ್ಯಸ್ವಾಮಿ ಸಾಲಿಮಠ್ ಅವರು ಇಲ್ಲಿ ಎಚ್ಚರಿಸಿದರು.

ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪೂರ್ ಜಿಲ್ಲೆಯ ಮುದ್ದೆಬಿಹಾಳದಲ್ಲಿ ಜರುಗಿದ ಧಾರ್ಮಿಕ ಸಮಾರಂಭದಲ್ಲಿ ಜಯಮೃತ್ಯಂಜಯ್ ಸ್ವಾಮೀಜಿ ಅರ್ಚಕರಿಗೆ ಮತ್ತು ಪುರೋಹಿತರಿಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದರು. ಎಲ್ಲ ಸಮಾಜದ ಅರ್ಚಕರು ಹಾಗೂ ಪುರೋಹಿತರಿಗೆ ದಲ್ಲಾಳಿಗಳೆಂದು ಹೇಳಿಕೆ ನೀಡಿದ್ದು ಅವಮಾನಕಾರಿಯಾಗಿದೆ. ಓರ್ವ ಪೀಠಾಧಿಪತಿಗಳಾಗಿ ಸಮಾಜದ ಬಹುಮುಖ್ಯ ಸ್ಥಾನದಲ್ಲಿದ್ದುಕೊಂಡು ಯಾವುದೇ ವೃತ್ತಿಯ ಕುರಿತು ಹೀನಾಯವಾಗಿ ಮಾತನಾಡುವುದು ಅವರಿಗೆ ಶೋಭೆಯಲ್ಲ ಎಂದು ಅವರು ಹೇಳಿದರು.

Contact Your\'s Advertisement; 9902492681

ಕಳೆದ ವರ್ಷ ಶ್ರಾವಣ ಮಾಸದಲ್ಲಿ ಸಹ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಆಗಲೂ ಸಹ ಆ ರೀತಿ ಪುನರಾವರ್ತನೆಯಾಗದಂತೆ ಎಚ್ಚರಿಕೆ ನೀಡಲಾಗಿತ್ತು. ಈಗಲೂ ಸಹ ಸ್ವಾಮೀಜಿ ಮತ್ತೆ ಮೊದಲಿನ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ. ಇನ್ನು ಸಹಿಸಲಾಗದು ಎಂದು ಅವರು ತಿಳಿಸಿದರು. ಕೂಡಲೇ ಕೊಟ್ಟ ಹೇಳಿಕೆಯನ್ನು ಹಿಂಪಡೆದು ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಸಂಘವು ಮುಂದಿನ ದಿನಗಳಲ್ಲಿ ಸಭೆ ಸೇರಿ ಹೋರಾಟದ ರೂಪುರೇಷೆ ಸಿದ್ದಪಡಿಸಲಿದೆ ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಗಂಗಾಧರ್ ಸ್ವಾಮಿ ಅಗ್ಗಿಮಠ್, ಸಿದ್ದೇಶ್ವರ್ ಸ್ವಾಮಿ ಹಿರೇಮಠ್, ಶ್ರೀಶೈಲ್ ಸ್ವಾಮಿ, ಕರಣಯ್ಯಸ್ವಾಮಿ, ವಿಜಯಕುಮಾರ್ ಸ್ವಾಮಿ, ಸಿದ್ದಯ್ಯಸ್ವಾಮಿ ನೀಲಾ, ಚನವೀರಯಯ್ಯ ಬೀರನಳ್ಳಿ, ಮಹೇಶ್ ಶಾಸ್ತ್ರಿಗಳು, ಬಸವರಾಜ್ ಕಲಗುರ್ತಿಮಠ್, ಜಗಯ್ಯಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here