ಗ್ರಂಥಪಾಲಕರಿಗೆ ಗುರುತಿನ ಚೀಟಿ ವಿತರಣೆ

0
138

ಚಿತ್ತಾಪುರ: ಗ್ರಾಮೀಣ ಓದುಗರನ್ನು ಸೆಳೆಯಲ್ಲೆಂದೇ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಸ್ಥಾನದಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ. ಗ್ರಂಥಪಾಲಕರು ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಮತ್ತು ಸಾಹಿತ್ಯಾಸಕ್ತರನ್ನು ಸೆಳೆಯಬೇಕು ಎಂದು ಚಿತ್ತಾಪುರ ತಾಪಂ ಸಹಾಯಕ ನಿರ್ದೇಶಕ ಶ್ರೀಮಂತ ಸಿಂಧೆ ಹೇಳಿದರು.

ಸೋಮವಾರ ಪಟ್ಟಣದ ತಾಪಂ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಕನಿಷ್ಟವೇತನಕ್ಕೆ ಭಾಜನರಾದ ಗ್ರಾಮೀಣ ಗ್ರಂಥಪಾಲಕರಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಗೌರವ ಧನ ಪಡೆದು ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದವರ ಶ್ರಮವನ್ನು ಗುರುತಿಸಿ ಸರ್ಕಾರ ಕನಿಷ್ಟ ವೇತನ ಜಾರಿಗೊಳಿಸಿದೆ. ಆ ಮೂಲಕ ಗ್ರಂಥಪಲಾಕರ ಆರ್ಥಿಕ ಭವಿಷ್ಯ ಕಾಪಾಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ಮುಂದುವರೆಸಬೇಕು. ಹೆಚ್ಚೆಚ್ಚು ಓದುಗರನ್ನು ಗ್ರಂಥಾಲಯಗಳಿಗೆ ಸೆಳೆಯುವ ಕೆಲಸ ಮಾಡಬೇಕು ಎಂದರು.

Contact Your\'s Advertisement; 9902492681

ಗ್ರಂಥಾಲಯಗಳಿಗೆ ಪೂರೈಕೆ ಮಾಡಲಾಗಿರುವ ಕಂಪ್ಯೂಟರ್, ಲ್ಯಾಪ್‍ಟಾಪ್, ಮೋಬಾಯಿಲ್ ಫೋನ್‍ಗಳು ಸೇರಿದಂತೆ ಮಕ್ಕಳ ಆಟಿಕೆಗಳು ಸದ್ಬಳಕೆಯಾಗಬೇಕು. ಓದುವ ಹವ್ಯಾಸದಿಂದ ವಿಮುಖರಾಗುವ ಮೂಲಕ ಮೋಬಾಯಿಲ್ ದಾಸರು ಪುನಹ ಗ್ರಂಥಾಲಯಗಳಿಗೆ ಬರುವಂತಾಗಬೇಕು. ಸಾಹಿತ್ಯ ಜ್ಞಾನ ಭಂಡಾರದ ಕಣಜಗಳಾಗಿರುವ ಗ್ರಂಥಾಲಯಗಳು ಜನರ ಜೀವನ ಶೈಲಿಯನ್ನೇ ಬದಲಿಸುವ ತಾಕತ್ತು ಹೊಂದಿವೆ. ಇದನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಗ್ರಂಥಪಾಲಕರು ಕ್ರೀಯಾಶೀಲತೆಯಿಂದ ಶ್ರಮಿಸಬೇಕು ಎಂದು ಹೇಳಿದರು.

ತಾಪಂ ಅಧಿಕಾರಿ ಮುಬಶೀರ್ ಅಲಿ, ವಿವಿಧ ಗ್ರಾಮಗಳ ಗ್ರಂಥಪಾಲಕರಾದ ಸಿದ್ರಾಮಪ್ಪ ಆರಿ, ಪ್ರಕಾಶ ಚಂದನಕೇರಿ, ಕಾಶೀಂ ಗುಡೆಸಾಬ, ಸುರೇಶ ಪಾಟೀಲ, ಗೋಪಾಲ ಪವಾರ, ದೇವಿಂದ್ರ ಚನ್ನಬಾ, ವಿಜಯಕುಮಾರ ಏರಿ, ಮಹೇಶ ಸಾತನೂರ, ಸುಮಂಗಲಾ ಭೀಮನಳ್ಳಿ, ಶಿವುಕುಮಾರ ಅನವಾರ, ದೇವಮ್ಮಾ ಪೂಜಾರಿ, ಸುಮಂಗಲಾ ಕಮರವಾಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here